ಚಿಕ್ಕೋಡಿ: ಕಾಂಗ್ರೆಸ್ ಪಕ್ಷದವರು ನಮ್ಮ ಸಾಧನೆ ತೋರಿಸಿ ಮತ ಕೇಳುತ್ತೇವೆ ಬಿಜೆಪಿಯವರ ಹಾಗೆ ಹಿಂದೂ ಮುಸ್ಲಿಂ ಜಗಳ ಹಚ್ಚಿ ಮತ ಕೇಳಲ್ಲ ಎಂದು ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಜಮೀರ ಅಹಮ್ಮದ ಹೇಳಿದರು.ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು ಬಿಜೆಪಿ ಅವರ ಸಾಧನೆ ಎಂದರೇ ಕೇವಲ ೪೦ ಪರ್ಸಂಟ್ ಕಮೀಷನ್ ಹೊಡೆಯೋದು.
ನಮ್ಮ ಕಾಲದಲ್ಲಿ ೧೫ ಲಕ್ಷ ಮನೆ ಕಟ್ಟಿಕೊಟ್ಟಿದ್ದಿವಿ.ಇವರು ಯಾವುದೇ ಮನೆ ಕೊಟ್ಟಿಲ್ಲ ಇದು ಇವರ ಸಾಧನೆ.
ಈ ರಾಜ್ಯದ ಜನರು ಹೇಳ್ತಿದ್ದಾರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅಂತ ಎಂದರು. ಇನ್ನೂ ಭಾಷಣದಲ್ಲಿ ಬಾಯಿ ತಪ್ಪಿ ಕ್ಷೀರ ಭಾಗ್ಯಕ್ಕೆ ಶೀಲ ಭಾಗ್ಯ ಯೋಜನೆ ಎಂದರು. ಇನ್ನೂ
ಅನ್ನ ಭಾಗ್ಯ ಎನ್ನುವುದಕ್ಕೆ ಅಣ್ಣನ್ ಭಾಗ್ಯ ಎಂದು ಮತ್ತೆ ಸರಿ ಮಾಡಿಕೊಂಡರು. ಈ ರಾಜ್ಯದ ಬಡವರಿಗೆ ಒಳ್ಳೆದು ಆಗಬೇಕು ಅಂತ ಅಂದ್ರೆ ಕಾಂಗ್ರೇಸ್ ಗೆ ಮತ ನೀಡಿ
ಭಾಷಣದ ನಡುವೆ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಜಮೀರ ಅಹಮ್ಮದ್ ಅಲ್ಪಸಂಖ್ಯಾತರ ಅನುದಾನವನ್ನು ಮೊದಲು ಕುಮಾಸ್ವಾಮಿಯವರು ಕಡಿಮೆ ಮಾಡಿದರು. ಅದನ್ನೆ ಅಡ್ವೇಂಟೆಜ್ ಆಗಿ ತೆಗೆದುಕೊಂಡು ಬಿಜೆಪಿಯವರೂ ಸಹ ಅನುದಾನ ಕಡಿಮೆ ಮಾಡಿದರು.
೫ ವರ್ಷಗಳ ಕಾಲ ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಆಚರಣೆ ಮಾಡಿದ್ದರು.ಆದರೆ ಈಗ ಅದನ್ನು ಸರ್ಕಾರದಿಂದ ಆಚರಣೆ ಮಾಡುತ್ತಿಲ್ಲ. ನಲ್ಲಿ, ನೀರು, ಅಭಿವೃದ್ದಿ ಕೆಲಸದ ಬಗ್ಗೆ ಚರ್ಚೆ ಆಗಬೇಕು ಅದರ ಬದಲು ಬಿಜೆಪಿ ರಾಜ್ಯಾಧ್ಯಕ್ಷರು ಲವ್ ಜಿಹಾದ್ ಬಗ್ಗೆ ಚರ್ಚೆ ಆಗಬೇಕು ಎಂತಾರೆ.
ಇವರಿಂದ ಅಚ್ಛೆದಿನ್ ನಿರೀಕ್ಷೆ ಮಾಡಲು ಸಾಧ್ಯವಾ ಎಂದುವೇದಿಕೆಯ ಮೇಲೆ ಪ್ರಧಾನಿ ಮೋದಿಯವರನ್ನು ಅಣಕಿಸುತ್ತ ಜಮೀರ್ ಅಹಮ್ಮದ ಮಿಮಿಕ್ರಿ ಮಾಡಿದರು.