ಬೆಳಗಾವಿ

ಯಾರದೋ ದುಡ್ಡು ಕಾಂಗ್ರೆಸ್ ಜಾತ್ರೆ ಭೀಮಪ್ಪ ಗಡಾದ ಆರೋಪ 

ಬೆಳಗಾವಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಂಘಟಿತ ಹೋರಾಟ ನಡೆಸುವ ಸಲುವಾಗಿ ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನ ಸಭೆಯಲ್ಲಿ 26 ರಾಜಕೀಯ ಪಕ್ಷಗಳ 30 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಮಹಾಘಟಬಂಧನ ಸಭೆಗೆ ಗಣ್ಯರು ಹಾಗೂ ಅಧಿಕಾರಿಗಳ ಔತಣ ಕೂಟಕ್ಕೆ 317 ಲಕ್ಷ ರೂಪಾಯಿ ವಿಪರೀತ ಖರ್ಚು ಮಾಡಲಾಗಿದೆ. ಈ ಅವ್ಯವಹಾರದ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡದ್ ಒತ್ತಾಯಿಸಿದ್ದಾರೆ.ವಿದೇಶದಿಂದ ಅಥವಾ ಬೇರೆ ರಾಜ್ಯಗಳಿಂದ ಬರುವ ಗಣ್ಯರನ್ನು ಸತ್ಕರಿಸುವುದು ಬಹಳ ಮುಖ್ಯ. ಆದರೆ ಇದರ ಹೆಸರಲ್ಲಿ ರಾಜ್ಯದ ಅಭಿವೃದ್ಧಿಗೆ ಈ ರೀತಿ ಸಂಗ್ರಹಿಸಿದ ತೆರಿಗೆ ಹಣವನ್ನು ಸರಕಾರಕ್ಕೆ ಮುಂಗಡವಾಗಿ ನೀಡುವುದು ಸರಿಯಲ್ಲ. ರಾಜ್ಯ ನೀತಿಸಂಹಿತೆ ಇಲಾಖೆ ನಿರ್ದೇಶನದಂತೆ ಈ ಮೊತ್ತವನ್ನು ಪಾವತಿಸಲಾಗಿದೆ. ಆದರೆ ಶಿಷ್ಟಾಚಾರಕ್ಕಾಗಿ ಸರ್ಕಾರ ಮಾಡಿರುವ ನಿಯಮಗಳೇನು? ಇದರ ಅಡಿಯಲ್ಲಿ ಇಂತಹ ದುಂದುವೆಚ್ಚಕ್ಕೆ ಅವಕಾಶವಿದೆಯೇ? ಇದುವರೆಗೆ ಯಾವುದೇ ರಾಜಕೀಯ ಅಧಿವೇಶನದಲ್ಲಿ ಚರ್ಚೆಯಾಗಿಲ್ಲ.ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ವಿವಿಧ ಅಧ್ಯಯನ ಸಮಿತಿಗಳಿಗೆ ಹಾಗೂ ಜನಪ್ರತಿನಿಧಿಗಳ ಇತರೆ ಕಾರ್ಯಕ್ರಮಗಳಿಗೆ ಆಗಮಿಸಿದ ಗಣ್ಯರು ಹಾಗೂ ಅತಿಥಿಗಳ ಆತಿಥ್ಯಕ್ಕೆ ಹಾಗೂ ಸನ್ಮಾನ್ಯ ರಾಜ್ಯಪಾಲರು/ಮುಖ್ಯಮಂತ್ರಿಗಳು ವಿವಿಧ ಸಂದರ್ಭಗಳಲ್ಲಿ ಏರ್ಪಡಿಸಿದ್ದ ಅತಿಥಿ ಸತ್ಕಾರಕ್ಕೆ 3,17,60,702-00 ರೂ.ಗಳನ್ನು ಸರ್ಕಾರದ ಖಜಾನೆಯಿಂದ ಖರ್ಚು ಮಾಡಲಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ.

TV24 News Desk
the authorTV24 News Desk

Leave a Reply