ಬೆಳಗಾವಿ

ಜಿಲ್ಲೆಯಲ್ಲಿ ಐದು ಸೇತುವೆಗಳು ಜಲಾವೃತ 

ಧಾರಾಕಾರ ಮಳೆ ಚಿಕ್ಕೋಡಿ ತಾಲೂಕಿನ ಐದು ಸೇತುವೆಗಳು ಜಲಾವೃತ 
ಬೆಳಗಾವಿ: ಜಿಲ್ಲೆಯಲ್ಲಿ ಕಳೆದ 3_4 ದಿನಗಳಿಂದ ಹಾಗು ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ,ಇತ್ತ ಚಿಕ್ಕೋಡಿ,ನಿಪ್ಪಾಣಿ ತಾಲೂಕಿನ ಕೃಷ್ಣಾ,ವೇದಗಂಗಾ,ದೂಧಗಂಗಾ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು.ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.ಮಾಂಜರಿ-ಬಾವನಸೌಂದತ್ತಿ,ಮಲಿಕವಾಡ-ದತ್ತವಾಡ,ಭೀವಶಿ- ಜತ್ರಾಟ,ಭೋಜ ಕಾರದಗಾ,ಬಾರವಾಡ-ಕುನ್ನೂರ ಹೀಗೆ ಕೆಳಹಂತದ 5 ಸೇತುವೆಗಳು ಜಲಾವೃತಗೊಂಡಿದೆ.ಪರ್ಯಾಯ ಮಾರ್ಗದ ಮೂಲಕ ಸಾರ್ವಜನಿಕರ ಸಂಚಾರವನ್ನು ಮಾಡುತ್ತಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ಸೇತುವೆಯ ಎರಡು ಬದಿ ಬ್ಯಾರಿಕೇಡ್ ಹಾಕಿ ಪೊಲೀಸರ ನಿಯೋಜನೆ ಮಾಡಲಾಗಿದೆ.
TV24 News Desk
the authorTV24 News Desk

Leave a Reply