ಬೆಳಗಾವಿ: ಕಾಂಗ್ರೆಸ್ 5 ಗ್ಯಾರಂಟಿಯಲ್ಲಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲು ಉತ್ಸುಕರಾಗಿದ್ದಾರೆ. ಯೋಜನೆ ಬಿಡುಗಡೆಯಾದ ಕೂಡಲೇ ಹಲವು ಮಹಿಳೆಯರು ತಮ್ಮ ದಾಖಲೆಗಳೊಂದಿಗೆ ಬೆಳಗಾವಿನಗರದ ಬೆಳಗಾವಿ ಒನ್ ಕೇಂದ್ರಕ್ಕೆ ಧಾವಿಸಿದರು. ಆದರೆ ಮಾಹಿತಿ ಕೊರತೆ ಮತ್ತು ಸರ್ವರ್ ಡೌನ್ ಸಮಸ್ಯೆಯಿಂದಾಗಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ
ಈ ಬಗ್ಗೆ ಸುದ್ದಿವಾಹಿನಿಯವರು ಕೇಳಿದ ಪ್ರಶ್ನೆಗೆ ಕರ್ನಾಟಕ ಬೆಳಗಾವಿ ಒನ್ ಕಚೇರಿಯ ಉದ್ಯೋಗಿಯೊಬ್ಬರು ಮಾತನಾಡಿ, ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಸಂದೇಶ ಬಂದ ನಂತರ ಇಲ್ಲಿಗೆ ಬಂದು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಆನ್ ಇತ್ಯಾದಿಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು .ಇದರಿಂದ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆಯನ್ನು ಮೊದಲ ದಿನವೇ ಭರ್ತಿ ಮಾಡಲು ಬಂದಿದ್ದ ಜನರು ಸರ್ವರ್ ಡೌನ್ ಸಮಸ್ಯೆಯಿಂದ ನಿರಾಸೆ ಅನುಭವಿಸಬೇಕಾಯಿತು.