ಬೆಳಗಾವಿಬೆಳಗಾವಿ ನಗರ

ನ್ಯಾಯ ಸಮಾನತೆ, ಕಾನೂನು ಅರಿವಿಗೆ  ನಾವು ಸಿದ್ದ: ಹಜಾರೆ 

ಬೆಳಗಾವಿ: ಭಾರತೀಯ ಸಂಸ್ಕೃತಿ ಪೌಂಡೇಶನ ಅಧ್ಯಕ್ಷೆ ಪ್ರಮೋದಾ ಹಜಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನ್ಯಾಯ ಸಮಾನತೆ, ಮಹಿಳಾ ಸಬಲೀಕರಣ ಮತ್ತು ಕಾನೂನು ಅರಿವಿಗೆ ಬದ್ದವಾಗಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
 
ಭಾರತೀಯ ಸಂಸ್ಕೃತಿ ಪೌಂಡೇಶನ  ಇದೆ ಜುಲೈ 2023 ರಿಂದ  ಕಾರ್ಯರೂಪಕ್ಕೆ ಬಂದಿದೆ.  ನಮ್ಮ ಸಂಸ್ಥೆ ಯುವಜನರು ಮತ್ತು ಸಾಮಾನ್ಯ ವ್ಯಕ್ತಿಗಳಿಗೆ ಸಂಬಂಧಿಸಿದ ಮಹಿಳೆಯರ ಮೇಲಿನ ದೌರ್ಜನ್ಯ, ಯುವಕರ ಸಮಸ್ಯೆಗಳು, ವಿದ್ಯಾರ್ಥಿಗಳ ಸಮಸ್ಯೆಗಳು, ಲೈಂಗಿಕ ಸಮಾಲೋಚನೆಯಂತಹ ಸಮಸ್ಯೆ ಕೌಟುಂಬಿಕ ಸಲಹಾ ಕೇಂದ್ರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕಿರುಕುಳ, ಸೈಬರ್ ಅಪರಾಧ, ಡ್ರಗ್ಸ್, ಮಾನವ ಕಳ್ಳಸಾಗಣೆ, ಸಾಮಾಜಿಕ ಸಮಸ್ಯೆಗಳು ಹೀಗೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ನಮ್ಮಸಂಸ್ಥೆ ಮುಂದಾಗಿದೆ. ಈ ಸಂದರ್ಭದಲ್ಲಿ ಮಾರುತಿ ಪಾಟೀಲ, ಶ್ರೀಮತಿ ದೀಪ್ತಿ ಭೋಸಾಲ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply