ನಿಪ್ಪಾಣಿ :ಆಸ್ತಿ ಹೆಸರು ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಉಪತಹಶೀಲ್ದಾರ್ ಹಾಗು ಗ್ರಾಮ ಲೆಕ್ಕಿಗ ಐದು ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಸಿಕ್ಕಿ ಬಿದ್ದ ಅಧಿಕಾರಿಗಳು ನಿಪ್ಪಾಣಿ ಉಪತಹಶೀಲ್ದಾರ್ ಅಭಿಜೀತ ಭೋಂಗಾಳೆ, ಗ್ರಾಮ ಲೆಕ್ಕಿಗ ಪಾರೇಶ ಸತ್ತಿ ಎಂದು ತಿಳಿದು ಬಂದಿದೆ.
ರಾಜಕುಮಾರ್ ತುಕಾರಾಮ್ ಶಿಂಧೆ ಆಸ್ತಿ ಹೆಸರು ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು, ರಾಜಕುಮಾರ್ ಶಿಂಧೆ ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಬುಧವಾರ ಲಂಚಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ