ಬೆಳಗಾವಿ

ಕೈಕಾಲು ತೊಳೆಯಲು ಹೋಗಿ ನೀರು ಪಾಲಾದ ಯುವಕರು 

ಬೆಳಗಾವಿ: ಮಹಾರಾಷ್ಟ್ರದ ತಿಲಾರಿ ಹಿನ್ನೀರಿನಲ್ಲಿ  ಯುವಕರು ಕೈಕಾಲು ತೊಳೆಯಲು ಹೋಗಿ  ಕಾಲು ಜಾರಿ ನೀರು ಪಾಲಾದ ಘಟನೆ ಹಜಗೋಳಿಯಲ್ಲಿ ನಡೆದಿದೆ. ನಿನ್ನೆ ವೀಕೆಂಡಗಾಗಿ ಹೋಗಿದ್ದ ಕ್ಯಾಂಪ್ ಪ್ರದೇಶದ ಯುವಕರು  ರೆಹಾನ್ ಅಲ್ತಾಫ್ ಖಾನ(15) ಮತ್ತು ಮುಸ್ತಫಾ ಅಲ್ತಾಫ್ ಖಾನ (12) ಇಬ್ಬರು ಒಂದೆ ಕುಂಟುಬದವರಾಗಿದ್ದು ಕೈಕಾಲು ತೊಳೆಯಲು ಹೋಗಿ  ಕಾಲು ಜಾರಿ  ನೀರಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಎನ್ ಡಿ ಆರ್ ಎಫ್ ತಂಡ ಹರಸಾಹಸ ಪಟ್ಟು ಮೃತ ದೇಹಗಳನ್ನು  ಹೊರಗೆ ತೆಗೆದಿದ್ದಾರೆ. ಒಂದೆ ದಿನ ಎರಡು ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಚಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.
TV24 News Desk
the authorTV24 News Desk

Leave a Reply