ಖಾನಾಪೂರ: ಪಟ್ಟಣದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಎಸ್ ಎಸ್ ಬಿ ಪ್ರಶಸ್ತ್ರ ಸೀಮಾ ಬಲ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳಿಂದ ಮತ್ತು ಸಿಬ್ಬಂದಿಗಳಿಂದ ಪಥಸಂಚಲನ ನಡೆಯಿತು.ಖಾನಾಪೂರ ಪೋಲಿಸ್ ಠಾಣೆಯಿಂದ ಪ್ರಾರಂಭಗೊಂಡ ಈ ಪಥಸಂಚಲನವು ಖಾನಾಪೂರ ಪ್ರಮುಖ ಶಿವಸ್ಮಾರಕ ವೃತ್ತದಿಂದ ಸ್ಟೇಷನ್ ರೋಡ್, ಮಹಾಜನ್ ಕೋಟ್ ಅದರಂತೆ ಬಜಾರ್ ಪೇಟೆ,ಪಾರಿಶ್ವಾಡ ಸರ್ಕಲ್,ಜಾಂಬೋಟಿ ಸರ್ಕಲ್ ಹೀಗೆ ಪ್ರಮುಖ ಓಣಿಗಳಲ್ಲಿ ಸಂಚರಿ ಶಿವಸ್ಮಾರಕ ವೃತ್ತದಲ್ಲಿ ಬಂದು ಮುಕ್ತಾಯಗೊಂಡಿತು.ಈ ಸಂದರ್ಭದಲ್ಲಿ ನಂದಗಡ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಬಸವರಾಜ್ ಲಮಾಣಿ ,ಎಸ್ ಎಸ್ ಬಿ ಕಮಾಂಡೂ ತೂರಾಟ,ಖಾನಾಪೂರ ಪಿಎಸ್ಐ ಪ್ರಕಾಶ್ ರಾಠೋಡ್,ಕೂಡಾ ಉಪಸ್ಥಿತರಿದ್ದರು.ಚುನಾವಣಿ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಈ ಪಥಸಂಚಲನ ನಡೆಸಿ ಚುನಾವಣೆ ಕಾನೂನು ಚೌಕಟ್ಟಿನಲ್ಲಿ ಭಯಮುಕ್ತಮತದಾನ ಮಾಡುವ ಮೂಲಕ ಶಾಂತಿಯಿಂದ ನಡೆಸುವ ಉದ್ದೇಶ ಸಾರುವ ಹಾಗೆ ನಡೆಯಿತು.
tv24plus.in > Blog > ಜಿಲ್ಲೆ > ಬೆಳಗಾವಿ > ಸೀಮಾ ಬಲ ಮತ್ತು ಪೋಲಿಸ್ ಇಲಾಖೆ ವತಿಯಿಂದ ಪಥಸಂಚಲನ