
ಕಿತ್ತೂರು:ನವಜಾತ ಶಿಶಿವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಎಸೆದು ಹೋಗಿದ್ದ ಪಾಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು. ತಡರಾತ್ರಿ ಕಿತ್ತೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಮಹಾಬಳೇಶ್ವರ ಕಾಳೋಜಿ ಹಾಗೂ ಸಿಮ್ರಾನ್ ಮೌಲಾಸಾಬ್ ಮಾಣಿಕಬಾಯಿ ಬಂಧಿತ ಆರೋಪಿಗಳಾಗಿದ್ದು ಅಕ್ರಮ ಸಂಬಂಧ ಇಟ್ಟುಕೊಂಡು ನವಜಾತ ಶಿಶುವನ್ನು ತಿಪ್ಪೆಗೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಎಸೆದಿದ್ದರಿಂದ ಶಿಶುವಿನ ತಲೆಗೆ ಪೆಟ್ಟಾಗಿ ಶಿಶು ಮರಣ ಹೊಂದಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ವೈದ್ಯರ ವರದಿಯನ್ನಾಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಮ್ರಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವಧಿ ಪೂರ್ವ ಜನ್ಮವಾಗಿದ್ದರಿಂದ ಶಿಶುವನ್ನು ತಿಪ್ಪೆಗೆ ಎಸೆದಿದ್ದಾಗಿ ಸಿಮ್ರಾನ್ ಉತ್ತರಿಸಿದ್ದಳು.ಇದಕ್ಕೆ ಮಹಾಬಳೇಶ್ವರ ಕಾರಣ ಎಂದು ಪೊಲೀಸರ ಮುಂದೆ ಸಿಮ್ರಾನ್ ಹೇಳಿದ್ದಳು ಎನ್ನಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕಲಂ 94, 103,(1) 238 ಸಹ ಕಲಂ3(5) ಅಡಿಯಲ್ಲಿ ಕೇಸ್ ದಾಖಲಾಗಿದೆ.