ಬೆಳಗಾವಿ

ಕಿತ್ತೂರು ಸಂಸ್ಥಾನ ದಾಖಲೆಗಳ ಪುಸ್ತಕ ಬಿಡುಗಡೆ

ರಾಮದುರ್ಗ: ಪಟ್ಟಣದಲ್ಲಿ  ನೌಕರರ ಸಂಘದ ಸಭಾಭವನದಲ್ಲಿ ಡಾ. ಎ ಬಿ ವಗ್ಗರ ಅವರ ಕಿತ್ತೂರು ಸಂಸ್ಥಾನ ದಾಖಲೆಗಳು ಸಂಪುಟ 2 ಪುಸ್ತಕವನ್ನು ಬಿಡುಗಡೆ ಸಮಾರಂಭದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮವನ್ನು ಸಹಕಾರಿ ಸಂಘದ ಎಲ್ಲ ಸದಸ್ಯರು ಹಾಗೂ ಎಲ್ಲಾ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಶಿಕ್ಷಕರ ಒಕ್ಕೂಟ ಮೇಳಿಯಲ್ಲಿ ಜರುಗಿತು , ಪುಸ್ತಕದ ಒಟ್ಟು ವಿಷಯ ವಸ್ತು ಹಾಗೂ ದಾಖಲೆಗಳನ್ನು ಹಾಗೂ ಪ್ರಸ್ತಾವನೆಯನ್ನು ಡಾ. ಎ ಬಿ ವಗ್ಗರ ಅವರು ಎಲ್ಲರ ಸಮ್ಮುಖದಲ್ಲಿ ಹಂಚಿಕೊಂಡರು , ಇದೇ ವೇಳೆಯಲ್ಲಿ ದಾಖಲೆಗೆ ಸಂಬಂಧಪಟ್ಟ ಹಾಗೂ ಪುಸ್ತಕದ ವಿವರಣೆಯ ಬಗ್ಗೆ ಎಸ್ ಜಿ ಚಿಕ್ಕನರಗುಂದ ಹಾಗೂ ವೈ ಬಿ ಕುಲಗೋಡ ರವರು ಪ್ರಶ್ನೆಯನ್ನು ಕೇಳಿದರು, ಇದೆಲ್ಲ ವಿಷಯ ವಸ್ತು ಮುಗಿದ ಮೇಲೆ ಕೊನೆಯದಾಗಿ ಸನ್ಮಾನ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಯಿತು. ಸನ್ಮಾನ ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕರು ಹಾಗೂ ರಚನಾಕಾರರಾದ ಡಾಕ್ಟರ್ ಎ ಬಿ ವಗ್ಗರ್ ದಂಪತಿಗಳಿಗೆ  ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದ ನಿರೂಪಣೆ ಸಂತೋಷ ವಾಲಿ ನಡೆಸಿ ಕೊಟ್ಟರು, ನಾಡಗೀತೆಯನ್ನು ಸಹಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಮಾಡಲಾಯಿತು, ಸ್ವಾಗತ ಮತ್ತು ಪುಷ್ಪಾರ್ಪಣೆಯನ್ನು ಡಾಕ್ಟರ್ ಎಸ್ ಎ ಕಟ್ಟೆಕಾರ ಹಾಗೂ ಅತಿಥಿಗಳ ಪರಿಚಯ ಪ್ರೊಫೆಸರ್ ರೆಹಮತ ತರೀಕೆರೆ ಮತ್ತು ಡಾಕ್ಟರ್ ಎ ಬಿ ವಗ್ಗರ ನಡೆಸಿಕೊಟ್ಟರು, ಪ್ರಸ್ತಾವಿಕ ಪ್ರೊ ಎಂ ಬಿ ಪಾಟೀಲ ಪ್ರಾಂಶುಪಾಲರು ಪದವಿಪೂರ್ವ ಕಾಲೇಜ ಬೆಂಬಳಗಿ , ಅಧ್ಯಕ್ಷ ನುಡಿಗಳು ಡಾಕ್ಟರ್ ಏ ಎಸ್ ಲಾಲಸಂಗಿ ಹಾಗೂ ವಂದನಾರ್ಪಣೆಯನ್ನು ಡಾ. ಡಿ ಡಿ ಮುಜಾವರ ನಡೆಸಿಕೊಟ್ಟರು. 

TV24 News Desk
the authorTV24 News Desk

Leave a Reply