ಬೆಳಗಾವಿ

 ಗೆಲ್ಲುವ ಸಾಮರ್ಥ್ಯ ವಿರುವ ಅಭ್ಯರ್ಥಿಗೆ  ಅವಕಾಶ ನೀಡಿ : ಕೊಣ್ಣೂರ 

ಬೆಳಗಾವಿ : ಮುಂಬರುವ ಬರುವ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ ಕಾಂಗ್ರೆಸ್ ಟಿಕಟ್ ಆಕಾಂಕ್ಷಿಯಾಗಿದ್ದೇನೆ ಎಂದು ಚಂದ್ರಶೇಖರ ಕೊಣ್ಣೂರ  ಹೇಳಿದರು

ಸೋಮವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಗೋಕಾಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದೇನೆ. ನಾನು ರೈತ ಕುಟುಂಬದಿಂದ  ಬಂದಿದ್ದೇನೆ. ವಿದ್ಯಾರ್ಥಿ ಜೀವನದಿಂದಲೂ ಸಮಾಜದ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅಲ್ಲದೆ, ರಾಜಕೀಯ ಜೀವನದಲ್ಲಿ ತಾಪಂ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಚಂದ್ರಶೇಖರ ಕೊಣ್ಣೂರ  ಹೇಳಿದರು
ಕಾಂಗ್ರೆಸ್  ಪಕ್ಷದ ಟಿಕೆಟ್ ನೀಡುವಂತೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ವಿವಿಧ ಕಾಂಗ್ರೆಸ್ ಗಣ್ಯರನ್ನು ಭೇಟಿಯಾಗಿ ಬಂದಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷ ನನ್ನ ಟಿಕೆಟ್ ಬಗ್ಗೆ ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧನಾಗಿದ್ದೇನೆ. ಪ್ರಕಾಶ ಬಾಗೋಜಿ, ಅಶೋಕ ಪೂಜಾರಿ, ಮಹಾಂತೇಶ ಕಡಾಡಿ ಹಾಗೂ ನಾನು ಗೋಕಾಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಅಶೋಕ ಪೂಜಾರಿ ಅವರು ನಾಲ್ಕು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿದ್ದಾರೆ. ಈ ಬಾರಿ ಹೊಸ ಮುಖ ಹಾಗೂ ಗೆಲ್ಲುವ ಸಾಮರ್ಥ್ಯ ವಿರುವ ಅಭ್ಯರ್ಥಿಗೆ   ಅವಕಾಶ ಮಾಡಿಕೊಡಬೇಕು ಎಂದು ಗೋಕಾಕ ಜನರ ಸಂಪರ್ಕ ಸಭೆ ನಡೆಸಿ ಪಕ್ಷದ ಗಮನಕ್ಕೆ ತರಲಾಗಿದೆ ಎಂದರು.

TV24 News Desk
the authorTV24 News Desk

Leave a Reply