Uncategorized

ಮುನ್ನುಗ್ಗಿ ನಡೆದರೆ ಗೆಲವು ಖಚಿತ: ಉಮೇಶ ಆಚಾರ್ಯ

ಜೀವನದಲ್ಲಿ ಸೋಲು ಸಹಜ. ಮುನ್ನುಗ್ಗಿ ನಡೆದರೆ ಗೆಲವು ಖಚಿತ
ಬೆಳಗಾವಿ: ಜಿಲ್ಲಾ ಆಡಳಿತ ಹಾಗೂ ಜಾನಕಿ ಸೇವಾ ಸಂಘ ವತಿಯಿಂದ ನಗರದಲ್ಲಿಂದು ಲಿಂಗರಾಜ್ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ತಿಳುವಳಿಕಾ ಕಾರ್ಯಾಗಾರ ನಡೆಸಲಾಯಿತು.
ಡಾ. ಉತ್ತಮ ಶೇಲಾರ ಚಿಕ್ಕೋಡಿ, ಮನೋವೈದ್ಯರು ಮಾತನಾಡಿ ಪ್ರತಿ ವರ್ಷ ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಬದ್ಧತೆ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ಕುರಿತಾಗಿ ಹಾಗೂ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಡಾ. ಸುಶಾನ್ ಮನೋ ವೈದ್ಯರು ಬಿಮ್ಸ್ ಬೆಳಗಾವಿ ಪ್ರತಿ ವರ್ಷ ವಿಶ್ವದಲ್ಲಿ 8 ರಿಂದ 9 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಭಾರತದಲ್ಲೂ ಸಹ ವರ್ಷಕ್ಕೆ ಲಕ್ಷಕ್ಕಿಂತ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಅಮೂಲ್ಯವಾದ ಬದಕನ್ನು ಯಾವದೋ ಕಾರಣಕ್ಕಾಗಿ ಕಳೆದುಕೊಳ್ಳುವ ಪ್ರವೃತ್ತಿ ದಿನೇ ದಿನೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ವರ್ಷ ಆತ್ಮಹತ್ಯೆ ತಡೆ ದಿನವನ್ನು ಆಚರಣೆ ಮಾಡಲಾಗುತ್ತದೆ.ಜನರಲ್ಲಿ ಆತ್ಮಹತ್ಯೆ ಮಾಡಿಕೊಳ್ಳದಂತೆ, ಹಾಗೂ ಭರವಸೆಯನ್ನು ತುಂಬುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಉದ್ಯಮಿ ಹಾಗೂ ಜಾನಕಿ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಉಮೇಶ ಆಚಾರ್ಯ ಮಾತನಾಡಿ ಜೀವನದಲ್ಲಿ ಸೋಲು ಸಹಜ. ಮುನ್ನುಗ್ಗಿ ನಡೆದರೆ ಗೆಲವು ಖಚಿತ ಎಂಬ ಮಾತಿನೊಂದಿಗೆ ಜೀವನದ ಮಹತ್ವವನ್ನು ತಿಳಿಸುವುದು ಮುಖ್ಯ ಮಕ್ಕಳ ಮನಸ್ಸುನ್ನು ಮತ್ತು ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು, ನಿಧಾನವಾಗಿ ಅವರಿಗೆ ತಿಳಿಹೇಳುವ ಪ್ರಯತ್ನ ಮಾಡಿ, ಜತೆಗೆ ಮಕ್ಕಳಲ್ಲಿ ಒತ್ತಡ ಹೇರದೆ ಅವರನ್ನು ಸ್ನೇಹಿತರಂತೆ ಕಾಣುವುದು ಒಳ್ಳೆಯದು ಎಂದು ಹೇಳಿ ವಿದ್ಯಾರ್ಥಿಗಲ್ಲಿ ಉತ್ಸಾಹ ತುಂಬಿದರು.
ಈ ಸಂದರ್ಭದಲ್ಲಿ ಶ್ರೀಮತಿ ಗಿರಿಜಾ ಹಿರೇಮಠ, ಡಾ ಗೀತಾ ಕಾಂಬಳೆ, ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಾನಂದ ಮಾಸ್ತಿಹೊಳಿ, ಉದ್ಯಮಿ ಹಾಗೂ ಜಾನಕಿ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಉಮೇಶ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.

TV24 News Desk
the authorTV24 News Desk

Leave a Reply