ಬೆಳಗಾವಿ: ಕಳೆದ ಎರಡು ಮೂರು ದಿನಗಳಿಂದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ.
ಡಿಕೆಶಿ ನನ್ನ ವೈಯಕ್ತಿಕ ಜೀವನ ಹಾಳ ಮಾಡಿದ್ದಾನೆ. ಅವನನ್ನು ಜೈಲಿಗೆ ಕಳುಹಿಸವರಿಗೂ ನಾನು ಬಿಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಶಪಥ ಮಾಡಿದ್ದಾರೆ. ಈ ಮದ್ಯ ಗೋಕಾಕ ಸಾಹುಕಾರ್ ಸಿ ಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಿಡಿ ಕೇಸ್ ಸಿಬಿಐಗೆ ವಹಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಎಲ್ಲ ಬೆಳವಣಿಗೆ ನಡುವೆ ಇದೀಗ ರಮೇಶ್ ಜಾರಕಿಹೊಳಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಕುರಿತು ನಾಳೆ ಸಂಜೆ ಅಮಿತ್ ಶಾ ಅವರೊಂದಿಗೆ ಚರ್ಚೆಗೆ ಸಮಯ ನಿಗದಿಯಾಗಿದೆ.
ಇಂದು ಸಂಜೆ ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ರಮೇಶ್, ನಾಳೆ ಸಂಜೆ ಅಮಿತ್ ಶಾ ಅವರಿಗೆ ಭೇಟಿ ನೀಡಿ ಸಿಡಿ ವಿಚಾರ ಚರ್ಚೆ ಮಾಡಲಿದ್ದಾರೆ.
ದಾಖಲೆ ಸಮೇತ ಅಮಿತ್ ಶಾ ಅವರ ಮುಂದೆ ವಿವರಿಸಲಿರುವ ರಮೇಶ್ ಜಾರಕಿಹೊಳಿ ಮುಂದಾಗಿದ್ದು ಶತಯಾಗತಾಯ ತಮ್ಮ ಈ ಸಿಡಿ ಕೇಸ್ ಷಡ್ಯಂತ್ರ ದಿಂದ ಕೂಡಿದೆ ಹೀಗಾಗಿ ಸಿಬಿಐಗೆ ನೀಡುವಂತೆ ಅಮಿತ್ ಶಾ ಅವರಿಗೆ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.