ಖಾನಾಪುರ ಕ್ಷೇತ್ರದಲ್ಲಿ ಸಧ್ಯ ಹೊಸ ಮುಖಕ್ಕೆ ಮಣೆ ಹಾಕುವಂತೆ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸದಾ ಎಂಇಎಸ್ ಕಪಿಮುಷ್ಠಿಯಲ್ಲಿದ್ದ ಖಾನಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬಂದಿದ್ದು ಅವಾಗೊಮ್ಮ ಇವಾಗೊಮ್ಮೆ ಮಾತ್ರ ಆದರೆ ಕಳೆದ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮದಿಂದ ಖಾನಾಪುರದಲ್ಲಿ ಕೈ ನಾಯಕಿ ಅಧಿಕಾರಕ್ಕೆ ಬಂದಿತ್ತು ಆದರೆ ಚುನಾವಣಾ ಪಲಿತಾಂಶದ ನಂತರ ಶಾಸಕರು ಕಾರ್ಯಕರ್ತರ ಕೈಗೆ ಸಿಕ್ಕದ್ದು ಆಗೊಮ್ಮೆ ಈಗೊಮ್ಮೆ ಮಾತ್ರ ಆದ್ದರಿಂದ ಇತ್ತೀಚೆಗೆ ಖಾನಾಪುರಕ್ಕೆ ಹೊಸ ಮುಖಕ್ಕೆ ಮಣೆ ಹಾಕುವಂತೆ ಕೂಗು ಜೋರಾಗಿ ಕೇಳಿ ಬರುತ್ತಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿ ಇರ್ಫಾನ್ ತಾಳಿಕೋಟೆ ನಾಮಪತ್ರ ಸಲ್ಲಿಸಿ ಬಂದಾಗಿದೆ
ಅಲ್ಪಸಂಖ್ಯಾತರ ಯುವಕರ ಅಲ್ಪಸಂಖ್ಯಾತ ಪ್ರಬಲ ನಾಯಕ
ಅಲ್ಲದೇ ತಾಲೂಕಿನ ಸುಮಾರು ಹದಿನೈದು ಸಾವಿರ ಅಲ್ಪಸಂಖ್ಯಾತರು ಯುವಕರು ಅಲ್ಪಸಂಖ್ಯಾತ ಪ್ರಬಲ ನಾಯಕರಾಗಿರುವ ಇರ್ಫಾನ್ ತಾಳಿಕೋಟೆ ಅವರನ್ನ ಬೆಂಬಲಿಸುವ ಸಾಧ್ಯತೆ ಇರುವದರಿಂದ ಈ ಬಾರಿ ಹೊಸ ಮುಖಕ್ಕೆ ಮಣೆ ಹಾಕಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ ಅಲ್ಲದೇ ಇಬ್ಬರ ನಡುವೆ ಸಾಕಷ್ಟು ಭಿನ್ನಾಬಿಪ್ರಾಯಗಳಿದ್ದು ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಎಂಬಂತೆ ವಿರೋದ ಪಕ್ಷದ ಅಭ್ಯರ್ಥಿಗಳಿಗೆ ವರದಾನವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ
ಎಂಇಎಸ್ ಭದ್ರಕೋಟೆ ಭೇದಿಸಿದ್ದ ಇರ್ಫಾನ್ ತಾಳಿಕೋಟೆ
ಕಳೆದ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ತಮ್ಮ ಸಹೋದರನ್ನ ಎಂಇಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲಿಸಿ ತಂದು ತಮ್ಮ ಸಾಮರ್ಥ್ಯ ತೋರಿಸಿದ್ದು ಒಂದು ಕಡೆಯಾದರೂ ತಾಲೂಕಿನ ಎಲ್ಲ ವರ್ಗದ ಮತ್ತು ಎಲ್ಲ ಸಮುದಾಯಗಳ ಜೊತೆ ಉತ್ತಮ ಭಾಂದವ್ಯ ಹೊಂದಿರುವ ಇರ್ಫಾನ್ ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ತಾಲೂಕಿನ ಮತದಾರ ಮಾತನಾಡಿಕೊಳ್ಳುತ್ತಿದ್ದಾನೆ
ಅಲ್ಪಸಂಖ್ಯಾತ ಪ್ರಭಲ ನಾಯಕ ಇರ್ಫಾನ್ ತಾಳಿಕೋಟೆ
ತಾಲ್ಲೂಕಿನಲ್ಲಿ ಮೂವತ್ತು ಸಾವಿರ ಅಲ್ಪಸಂಖ್ಯಾತ ಮತದಾರರಿದ್ದು ಅವರಲ್ಲಿ ಇರ್ಫಾನ್ ತಾಳಿಕೋಟೆ ಪ್ರಭಲ ನಾಯಕರಾಗಿದ್ದಾರೆ ಕಳೆದ ಚುನಾವಣೆ ಫಲಿತಾಂಶ ಬಂದಾಗಿನಿಂದ ಹಾಲಿ ಶಾಸಕರ ಮೇಲೆ ಬೇಸರಗೊಂಡಿರುವ ಅಲ್ಪಸಂಖ್ಯಾತ ಮತದಾರ ಈ ಬಾರಿ ಕಾಂಗ್ರೆಸ್ ನಿಂದ ಮುಖ ತಿರುಗಿಸುವ ಯೋಚನೆಯಲ್ಲಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿದ್ದು ಒಂದು ವೇಳೆ ಹೊಸ ಮುಖಕ್ಕೆ ಮಣೆ ಹಾಕಿದರೆ ಕಾಂಗ್ರೆಸ್ ಮತಬ್ಯಾಂಕ್ ಆಗಿರುವ ಅಲ್ಪಸಂಖ್ಯಾತರನ್ನ ಉಳಿಸಿಕೊಳ್ಳುವದರ ಜೊತೆಗೆ ಪಕ್ಷದ ಹಿತ ಕಾಯುವದು ಹೈಕಮಾಂಡ್ ಜವಾಬ್ದಾರಿಯಾಗಿದ್ದು ಪಕ್ಷದ ಹಿರಿಯ ನಾಯಕರು ಇದನ್ನ ಯಾ ರೀತಿ ನಿಭಾಯಿಸುತ್ತಾರೆ ಕಾಯ್ದು ನೋಡಬೇಕಾಗಿದೆ ಅಲ್ಲದೇ ಹದಿನಾರು ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ಅದರಲ್ಲಿ ಖಾನಾಪುರವು ಒಂದಾಗಿದೆ
ಇಬ್ಬರ ನಡುವೆ ರಾಜಿ ಸಂದಾನಕ್ಕೆ ನೋ ಎಂದ ಇರ್ಫಾನ್ ತಾಳಿಕೋಟೆ
ಚುನಾವಣೆ ದಿನಾಂಕ ಸಮೀಪಿಸುತ್ತಿಂದ ದಿನದಿಂದ ದಿನಕ್ಕೆ ಪೈಪೋಟಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿದ್ದು ಪ್ರತಿಷ್ಟೆ ಉಳಿಸಿಕೊಳ್ಳುವಲ್ಲಿ ಆಯಾ ಪಕ್ಷಗಳು ತಲೆಕೆಡೆಸಿಕೊಳ್ಳುತ್ತಿದ್ದು ಭಿನ್ನಾಭಿಪ್ರಾಯ ಶಮನಗೊಳಿಸುವಲ್ಲಿ ಪ್ರಮುಖ ಪಕ್ಷಗಳು ತಲೆ ಕಲೆಕೆಡೆಸಿಕೊಂಡಿದ್ದು ಖಾನಾಪುರ ಕೂಡ ಹೊರತಾಗಿಲ್ಲ ಒಂದು ವೇಳೆ ಹೊಂದಾಣಿಕೆ ಸಾಧ್ಯವೇ ಎಂಬ ಕುಂದಾನಗರಿ ಪ್ರಶ್ನೆಗೆ ಉತ್ತರಿಸಿದ ಇರ್ಫಾನ್ ನಾನು ನನ್ನ ಬಲ ಜನರ ಆಶೀರ್ವಾದದಿಂದ ರಾಜಕಾರಣದಲ್ಲಿ ಈ ಸ್ಥಾನದಲ್ಲಿದ್ದು ತಾಲೂಕಿನ ಜನ ಈಗ ಸಂಕಷ್ಟದಲ್ಲಿದ್ದಾರೆ ಅಭಿವೃದ್ಧಿ ಮರುರಿಚಿಕೆಯಾಗಿದೆ ತಾಲ್ಲೂಕು ಇಂತಹ ಸಮಯದಲ್ಲಿ ಜನರ ಜೊತೆ ನಿಲ್ಲುವದನ್ನ ಬಿಟ್ಟು ರಾಜೀ ಸಂಧಾನ ಮಾಡಿಕೊಂಡು ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಹೇಳಿದರು ಒಟ್ಟಾರೆ ಇಬ್ಬರ ಜಗಳ ಮೂರನೇಯವರಿಗೆ ಲಾಭ ಆಗದಿರಲಿ ಎನ್ನುವದು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತನ ಕೂಗಾಗಿದೆ ಇದೆನ್ನಲ್ಲ ಕಾಂಗ್ರೆಸ್ ಹೈ ಕಮಾಂಡ್ ಯಾವುದೇ ರೀತಿ ನಿಭಾಯಿಸತ್ತೆ ಎನ್ನುವದನ್ನ ಕಾದುನೋಡಭೆಕಾಗಿದೆ