ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ಕುಡಿದ ಅಮಲಿನಲ್ಲಿ ಅಣ್ಣತಮ್ಮಂದಿರ ಜಗಳ ಮಾಡಿಕೊಂಡು, ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಈ ಘಟನೆಯಿಂದ ಗೋಕಾಕ ಜನರು ಬೆಚ್ಚಿಬಿದ್ದಿದ್ದಾರೆ. ಒಂದೆ ಮನೆಯಲ್ಲಿ ವಾಸ ಮಾಡುತ್ತಿದ್ದ ಇಬ್ಬರು ಯುವಕರು ಕುಡಿದು ಗಲಾಟೆ ಮಾಡಿಕೊಂಡು ಮನೆಯಲ್ಲಿ ಇದ್ದ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಗೊಕಾಕಿನ ಫಾಲ್ಸ್ ನ ವಾಲ್ಮಿಕಿ ನಗರದಲ್ಲಿ ಈ ಘಟನೆ ನಡೆದಿದ್ದು, ತಿಲಕ ಎಂಬ ಯುವಕ ಚೇತನ ಎಂಬ ಯುವಕನ ಕೊಲೆ ಮಾಡಿದ್ದಾನೆ. ಒಟ್ನಲ್ಲಿ ಏನೊ ಮಾಡಲು ಹೊಗಿ ಈ ಕೊಲೆ ನಡೆದಿದೆ.