ಬೆಳಗಾವಿಬೆಳಗಾವಿ ನಗರ

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಾಳೆ ದೂರು: ಎನ್ ರವಿಕುಮಾರ  

ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ ವಿತರಣೆ ಮಾಡುತ್ತಿರುವ ಮಿಕ್ಸರ್ ವಿತರಣೆ ವಿಡಿಯೋ ಬಿಡುಗಡೆ.ಇದರ ಬಗ್ಗೆ ನಾವು ಶೀಘ್ರದಲ್ಲಿಯೇ ದೂರು ದಾಖಲು ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್ ರವಿಕುಮಾರ ಹೇಳಿದ್ದಾರೆ. 
 ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭ್ರಷ್ಟಾಚಾರ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಟೀಕೆ ವಿಚಾರ ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್ ಭ್ರಷ್ಟಾಚಾರ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ಯಾವುದೇ ನೈತಿಕತೆ ಇಲ್ಲ.ಡಿಕೆ ಶಿವಕುಮಾರ ಅವರು ಯಾವ ಸಾಧನೆ ಮಾಡಿ ಜೈಲಿಗೆ ಹೋಗಿದ್ದರು? 
ಸತ್ಯಹರಿಶ್ಚಂದ್ರನಂತೆ ಮಾತನಾಡುವ ಡಿಕೆ, ಶಿವಕುಮಾರಕ್ಕೆ ದಾಖಲೆ ನೋಡಲಿ.ಶಿವಕುಮಾರ ಬೇರೆಯವರತ್ತ ಬೆರಳು ಮಾಡಿ ತೋರಿಸುವ ಮುನ್ನ ತಮ್ಮ ಬಗ್ಗೆ ಯೋಚಿಸಲಿ.ಸಿದ್ರಾಮಯ್ಯ ಭ್ರಷ್ಟಾಚಾರಿಗೆ ಆಶ್ರಯದಾತ, ಅವರ ಕಾಲದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ.
 ರಮೇಶ್ ಜಾರಕಿಹೋಳಿ 6000ರೂ ಹಣಕೊಟ್ಟಿದ್ದಕ್ಕೆ ಏನಾದ್ರೂ ದಾಖಲೆ ಇದೆಯಾ?.ಕಾಂಗ್ರೆಸ್ ಶಾಸಕಿ ಸಾರ್ವಜನಿಕವಾಗಿ ಮಿಕ್ಸರ್, ಪಾತ್ರೆ ಹಂಚಿಕೆ‌ಮಾಡುತ್ತಿದ್ದಾರೆ.ನಾಳೆ‌ ಬೆಳಿಗ್ಗೆ ಬೆಂಗಳೂರಿನಲ್ಲಿ ಈ ವಿಡಿಯೊ ತೆಗೆದುಕೊಂಡು ಹೋಗಿ ಚುನಾವಣೆ ಆಯೋಗಕ್ಕೆ ದೂರು ನೀಡುತ್ತೇವೆ. ನಮ್ಮ ಬಿಜೆಪಿ ನಾಯಕರ ನೇತೃತ್ವದಲ್ಲಿ ದೂರು‌ನೀಡಲಾಗುವುದು ಎಂದು ಹೇಳಿದರು.
 
 
TV24 News Desk
the authorTV24 News Desk

Leave a Reply