ಬೆಳಗಾವಿಬೆಳಗಾವಿ ನಗರ

 ಫೈರೀಂಗ್ ಪ್ರಕರಣ: ಇಸ್ಕೊ ಭೀ ಕತಮ್ ಕರನಾ ಚಾಹಿಯೇ

ಬೆಳಗಾವಿ: ನಾಲ್ಕೈದು ವರ್ಷಗಳ ಹಿಂದೆ ಇಸ್ಕೊ ಭೀ ಖತಮ್ ಕರನಾ ಚಾಹಿಯೇ ಎಂದು ಅನ್ಯ ಕೋಮಿನ ಯುವಕ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಎಂದು ಶ್ರೀರಾಮ ಸೇನೆಯ ಜಿಲ್ಲಾದ್ಯಕ್ಷ ರವಿ ಕೋಕೀತ್ಕರ್ ಅವರು ಆತಂಕಕಾರಿ ವಿಚಾರ ತಿಳಿಸಿದ್ದಾರೆ. 
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ನಾನಾಗಲಿ ನನ್ನ ಬೆಂಬಲಿಗರಾಗಲಿ ಯಾರ ಜೊತೆಯು ಕುರಿತು ಎಲ್ಲೂ ಚರ್ಚೆ ಮಾಡಿಲ್ಲ. ಯಾವುದೇ ಪೊಲೀಸ ಅಧಿಕಾರಿಗಳು ನಮಗೆ ಸಂಧಾನ ಸಭೆ ಮಾಡಿಲ್ಲ ಎಂದು ಫೈರಿಂಗ್ ಮುಂಚೆ ಪೊಲೀಸರ ಸಮ್ಮುಖದಲ್ಲಿ ಸಂಧಾನ ಸಭೆ ಮಾಡಿದ್ದಿರಿ ಎಂದು ಮಾದ್ಯಮಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಎರಡು-ಮೂರು  ತಿಂಗಳ ಹಿಂದೆ ನನ್ನ ಮೇಲೆ ಫೈರೀಂಗ್ ಮಾಡಿದವರ ಜೊತೆ ಮಾತಾಡಿ ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಹೇಳಿದ್ದೆ.  ನನ್ನ ಮೇಲೆ ಫೈರಿಂಗ್ ಮಾಡಿದವರ ಜೊತೆ ನಾನು ಯಾವುದೇ ವ್ಯವಹಾರ ಮಾಡಿಲ್ಲ. ನಮ್ಮ ಮೇಲೆ ವ್ಯಕ್ತಿಕ ಆರೋಪ ಮಾಡಿದ್ದರಿಂದ, ಫೈರೀಂಗ್ ಮಾಡಿದವರು ಮತ್ತು ನಮ್ಮ ಮಧ್ಯೆ ಜಗಳ ಆಗಿತ್ತು. ಫೈರೀಂಗ್ ಹಿಂದೆ ಎನು  ಉದ್ದೇಶ ಇದೆ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಇಸ್ಕೊ ಭೀ ಕತಮ ಕರನಾ ಚಾಹಿಯೇ ಎಂದು ಮುಸ್ಲಿಂ ಯುವಕ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಎಂದು ಶ್ರೀರಾಮ ಸೇನೆಯ ಜಿಲ್ಲಾದ್ಯಕ್ಷ ರವಿ ಕೋಕೀತ್ಕರ್ ಅವರು ಆರೋಪ ಮಾಡಿದ್ದಾರೆ. ‌
TV24 News Desk
the authorTV24 News Desk

Leave a Reply