ಖಾನಾಪುರ:ಸದಾ ನಾಡದ್ರೋಹಿ ಚಟುವಟಿಕೆ ನಡೆಸುತ್ತಾ ಬಂದಿರುವ ಎಂಇಎಸ್ ಮತ್ತೆ ಗಡಿಯಲ್ಲಿ ಬಾಲಬಿಚ್ಚಿದ್ದು ಖಾನಾಪುರ ಪಟ್ಟಣದಲ್ಲಿ ಹುತಾತ್ಮ ದಿನಾಚರಣೆ ಅಂಗವಾಗಿ ಎಂಇಎಸ ಮುಖಂಡರಿಂದ ಖಾನಾಪುರ ತಾಲ್ಲೂಕನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಕುರಿತು ಭಾಷಣ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ
ಖಾನಾಪುರ ಪಟ್ಟಣದ ಸ್ಟೇಷನ್ ರಸ್ತೆ ಹತ್ತಿರ ಹುತಾತ್ಮ ದಿನದಂದು ಕರ್ನಾಟಕ ಸರ್ಕಾರದ ವಿರುದ್ದ ಘೋಷಣೆ ಕೂಗಿ ಖಾನಾಪುರ ತಾಲೂಕನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಕುರಿತು ಅವ ಹೇಳನಕಾರಿ ಹೇಳಿಕೆಯನ್ನು ಕೊಟ್ಟ ತಾಲೂಕ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಹಾಗೂ ಎಂಇಎಸ್ ಮುಖಂಡರಾದ ಸುರೇಶ ದೇಸಾಯಿರ ತಮ್ಮ ಭಾಷಣದಲ್ಲಿ ಗಡಿ ಪ್ರಶ್ನೆ ಕೇಳದ 66 ವರ್ಷಗಳಿಂದ ಹಾಗೆ ಇರುತ್ತದೆ ಇದರ ಬಗ್ಗೆ ನಾವು ಕೆಳದ ಎಷ್ಟು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿರುವೆ ಗಡಿ ಪ್ರಶ್ನೆಯು ಸುಪ್ರೀಂಕೋರ್ಟ್ ಅಲ್ಲಿ ಇದ್ದರೂ ಕೂಡ ರಸ್ತೆಗೆ ಇಳಿದು ನಮ್ಮ ಹೋರಾಟ ಯಾವತ್ತೂ ನಡೆಯುತ್ತಿರುತ್ತದೆ ಅದಕ್ಕಾಗಿ ನಾವು ಮರಾಠಿಗರು ಇವತ್ತಿನ ದಿವಸ ಹುತಾತ್ಮ ಆಗಿರುವ ವ್ಯಕ್ತಿಯ ಬಗ್ಗೆ ನೆನೆಸಿಕೊಳ್ಳಲೇಬೇಕು ಎಂದರು.
ಈ ವೇಳೆ ಎಂಇಎಸ್ ಪುಂಡರಾದ ಪಿ ಎಚ್ ಪಾಟೀಲ್, ಸೂರ್ಯ ಜಿ ಪಾಟೀಲ್, ಬಳಿರಾಮ ಪಾಟೀಲ್, ರವೀಂದ್ರ ಪಾಟೀಲ್, ಪ್ರತೀಕ್ ದೇಸಾಯಿ, ಧನಂಜಯ್ ಪಾಟೀಲ್, ರಾಜು ಪಾಟೀಲ್, ಕಿರಣ್ ಪಾಟೀಲ್, ಕಿಶೋರ್ ಹೆಬ್ಬಾಳ್ಕರ್, ರಾಮು ಪಾಟೀಲ್, ಹಾಗೂ ಶಿವಸೇನೆ ಪುಂಡರು ದಯಾನಂದ್ ಚೋಪಡೆ ಮಲ್ಲಪ್ಪ ಪಾಟೀಲ್ ದತ್ತು ಕುದುರೆ ನೂರಾರು ಕಾರ್ಯಕರ್ತರು ಉಪಸ್ಥಿದ್ದರು