ಬೆಳಗಾವಿ: ಸುವರ್ಣ ಸೌಧದ ವಿಧಾನಸಭೆ ಸಭಾಂಗಣದಲ್ಲಿ ಸಾವರ್ಕರ್ ಫೋಟೋ ಅನಾವರಣ ಆಯ್ತು, ಹಿಂಡಲಗಾ ಜೈಲಿನಲ್ಲಿ ಪೋಟೋ ಅನಾವರಣವನ್ನು ಪರಿಶೀಲನೆಗೆ ಆಗಮಿಸಿರುವ ಸಚಿವ ಅರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್.
ವೀರ್ ಸಾವರ್ಕರ್ ಬೆಳಗಾವಿ ಹಿಂಡಲಗಾ ಜೈಲಲ್ಲಿ 100 ದಿನ ವಿಚಾರಣಾಧೀನ ಕೈದಿಯಾಗಿ ಸೆರೆವಾಸದಲ್ಲಿದ್ದರು. 1950ರ ಜುಲೈ 13ರಂದು ಬೆಳಗಾವಿ ಹಿಂಡಲಗಾ ಜೈಲಿನಿಂದ ಬಿಡುಗಡೆ ಆಗಿದ್ದರು.
ಬೆಳಗಾವಿ ತಾಲೂಕಿನ ಹಿಂಡಲಗಾದಲ್ಲಿ ಇರುವ ಕಾರಾಗೃಹ ಸಾವರ್ಕರ್ ಸೆರೆವಾಸ ಅನುಭವಿಸಿದ್ದ ಸೆಲ್ನಲ್ಲಿ ಫೋಟೋ ಅನಾವರಣಗೊಳಿಸಿ ಪುಷ್ಪನಮನ ಮಾಡಲಾಯಿತು.
ಮೊದಲು ಜೈಲು ಅಧಿಕಾರಿಗೆ ಫೋಟೋ ನೀಡಿದ ಸಚಿವ ಬಿ.ಸಿ.ನಾಗೇಶ್, ಎಂಎಲ್ ಸಿ ರವಿಕುಮಾರ್,ಮುರುಗೇಂದ್ರ ಗೌಡ ಪಾಟೀಲ್, ಡಾ. ಸೋನಾಲಿ ಸರ್ನೋಬತ್ ಸೇರಿ ಇತರರು, ಬಳಿಕ ಸೆಲ್ನಲ್ಲಿ ಫೋಟೋ ಅನಾವರಣ ಮಾಡಿ ಪುಷ್ಪ ನಮನ ಮಾಡಲಾಯಿತು. ಭಾರತ ಮಾತಾ ಕೀ ಜೈ, ಸ್ವಾತಂತ್ರ್ಯ ವೀರ ಸಾವರ್ಕರ್ಗೆ ಜಯವಾಗಲಿ ಎಂದು ಘೋಷಣೆ ಜೈಲಿನಲ್ಲಿ ಮುಗಿಲೇರಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಇನ್ನಿತರರು ಉಪಸ್ಥಿತರಿದ್ದರು.