ಬೆಳಗಾವಿಬೆಳಗಾವಿ ನಗರ

ಪಂಚಮಸಾಲಿ 2 ಎ ಮೀಸಲಾತಿ: ಸರ್ಕಾರಕ್ಕೆ ನುಂಗಲಾರದ ತುತ್ತು…!  

ಬೆಳಗಾವಿ: ಬಸವ ಜಯ ಮೃತ್ಯುಂಜಯ ಶ್ರೀಗಳ ನೇತ್ರತ್ವದ ವಿರಾಟ ಲಿಂಗಾಯತ ಪಂಚಮಸಾಲಿ ಸಮುದಾಯದ ಶಕ್ತಿ ಪ್ರದರ್ಶನ ಹಾಗೂ ಹಕ್ಕೊತ್ತಾಯ ರಣಾರ್ಭಟಕ್ಕೆ ಬೊಮ್ಮಾಯಿ ಸರ್ಕಾರ ಶರಣು ಎಂದು ವಿನಯತೆಯಿಂದ ನಡೆದಕೊಂಡಿತ್ತು
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಯನ್ನು ಡಿ.29 ರಂದು ನೀಡುವುದಾಗಿ ಭರವಸೆ ನೀಡಿ, ಬಿಸೋ ದೊಣೆಯಿಂದ ಪಾರಾದ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ ಎದುರಾಗಲಿದೆ.
ಸಿಎಂ ಬಸವರಾಜ ಬೊಮ್ಮಾಯಿಅವರು ತಜ್ಞರ ಜೊತೆ ಚರ್ಚಿಸಿ ಡಿ.29 ರಂದು ಸಮುದಾಯದಕ್ಕೆ ಮೀಸಲಾತಿ ನೀಡುವುದಾಗಿ ತಿಳಿಸಿದ್ದರು. ಒಂದು ವೇಳೆ ಸಿಎಂ ಮತ್ತೆ ಭರವಸೆ ಹಾದಿ ತುಳಿದರೆ, ಸರ್ಕಾರಕ್ಕೆ ಲಿಂಗಾಯತ ಪಂಚಮಸಾಲಿ ಗಂಭೀರ ಹೊಡೆತ ನೀಡುವ ಮಾತುಗಳು ಕೇಳಿ ಬರುತ್ತಿವೆ.
TV24 News Desk
the authorTV24 News Desk

Leave a Reply