ಬೆಳಗಾವಿಬೆಳಗಾವಿ ನಗರ

ರಾಜ್ಯದ ಒಂದು ಹಳ್ಳಿಯನ್ನು ಬಿಟ್ಟುಕೊಡುವದಿಲ್ಲಾ: ಡಿ ಕೆ ಶಿವಕುಮಾರ

ಬೆಳಗಾವಿ: ಇಂದು ಸುವರ್ಣಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಕೆ ಪಿ ಸಿ ಸಿ ಅದ್ಯಕ್ಷ ಡಿ ಕೆ ಶಿವಕುಮಾರ ಮಹಾರಾಷ್ಟ್ರ ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕದ ಕೆಲ ನಗರಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ನಿರ್ಣಯ ಗೋತ್ತುವಳಿ ಹೊರಡಿಸಿದರ ಹಿನ್ನಲೆಯಲ್ಲಿ ಇದನ್ನು ಕರ್ನಾಟಕ ಹಾಗೂ ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ನಮ್ಮ ರಾಜ್ಯದ ಒಂದು ಹಳ್ಳಿಯನ್ನು ಬಿಟ್ಟುಕೊಡುವದಿಲ್ಲಾ, ಮಹಾರಾಷ್ಟ್ರದ ಹಳ್ಳಿಗಳು ನಮಗೆ ಬೇಡ, ಚುನಾವಣೆ ಹತ್ತಿರ ಬಂದಿದೆ ಅದಕ್ಕೆ ಬಿಜೆಪಿ ಕುತಂತ್ರ ರಾಜಕಾರಣ ಮಾಡುತ್ತಿದೆ.ಅವರು ಮಾಡಿದ ತೀರ್ಮಾನಕ್ಕೆ ನಮ್ಮ ವಿರೋಧವಿದೆ ಬೇಕು ಅಂತ ಅಶಾಂತಿ ಮೂಡಿಸಲು ತೊಂದರೆ ಕೋಡುವ ದೃಷ್ಟಿಯಿಂದ ಹೀಗೆ ಮಾಡಿದ್ದಾರೆ. ಕರ್ನಾಟಕ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಹಾಗು ಪಕ್ಷದ ಸಹಕಾರ ಯಾವಗಲೂ ಇರುತ್ತದೆ.
ಸಭೆಯಲ್ಲೂ ಇದನ್ನು ನಾವು ಪ್ರಸ್ತಾಪ ಮಾಡ್ತೀವಿ. ಇದರ ಕುರಿತು ನಾವು ನಿರ್ಣಯ ಮಂಡಿಸುತ್ತೇವೆ. ದ್ವೇಷ, ಅಸೂಯೆಯಿಂದ ಹೀಗೆ ಮಾಡ್ತಾ ಇದ್ದಾರೆ. ಕೇಂದ್ರದಲ್ಲಿ ಮಹಾರಾಷ್ಟ್ರ, ಹಾಗೂ ‌ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ ರಾಜಕೀಯವಾಗಿ ಹೆಚ್ಚು ಕಡಿಮೆ ಆಗುತ್ತೆ ಅಂತ ಹೀಗೆ ಮಾಡ್ತಾ ಇದ್ದಾರೆ.ಈ ಭಾಗದ ರಾಜಕಾರಣದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ, ಹೀಗಾಗಿ ಇವರೇ ಕುಮ್ಮಕ್ಕು ಕೊಟ್ಟು ಹೀಗೆ ಮಾಡಿಸ್ತಾ ಇದ್ದಾರೆ. ಕನ್ನಡ ಪರ ಸಂಘಟನೆ ಹಾಗೂ ರಾಜ್ಯದ ಜನ ಹೆದರುವ ಅವಶ್ಯಕತೆ ಇಲ್ಲ ಎಂದರು.
TV24 News Desk
the authorTV24 News Desk

Leave a Reply