ಬೆಳಗಾವಿ

ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ ರೈತರನ್ನು ಬಂಧಿಸಿದ ಪೋಲಿಸ್.!

ಘಟಪ್ರಭಾ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯ ತುಕ್ಕಾನಟ್ಟಿ ಮತ್ತು ರಾಜಾಪೂರ ಗ್ರಾಮಗಳಿಂದ ಮಧ್ಯರಾತ್ರಿ ಮನೆಗಳಿಗೆ ನುಗ್ಗಿ ರೈತ ಮುಖಂಡರನ್ನು ಬಂಧಿಸಿರುವ ಘಟನೆ ನಡೆದಿದೆ. ‌

ತುಕ್ಕಾನಟ್ಟಿಯ ಕುಮಾರ ಮದಲೆ, ಗುರುನಾಥ ಹುಕ್ಕೇರಿ, ಸತ್ಯಪ್ಪಾ ಮಲ್ಲಾಪೂರ ಸೇರಿದಂತೆ ಇನ್ನೂ ಅನೇಕ ರೈತರನ್ನು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪೊಲೀಸರು ಮನೆಗೆ ನುಗ್ಗಿ ಬಂಧಿಸಿದ್ದಾರೆ ಎನ್ನಲಾಗಿದೆ.

ಇನ್ನು ಘಟನೆಯ ಕುರಿತು ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ಘಟಪ್ರಭಾ ಪೊಲೀಸರು ರಾಜಾಪೂರ ಮತ್ತು ತುಕ್ಕಾನಟ್ಟಿ ಗ್ರಾಮಗಳಿಗೆ ತೆರಳಿ ರೈತ ಮುಖಂಡರನ್ನು ಯಾವುದೇ ಕಾರಣ ತಿಳಿಸದೆ ಬಂಧಿಸಿದ್ದಾರೆಂದು ರೈತರು ಆರೋಪಿಸುತ್ತಿದ್ದಾರೆ. ಮುಖಂಡರಿದ ಮೊಬೈಲ್ ಫೋನಗಳನ್ನು ಸಹ ಪೊಲೀಸರು ಕಿತ್ತುಕೊಂಡಿದ್ದಾರೆಂದು ಹೇಳುತ್ತಿದ್ದಾರೆ.

ಇನ್ನೂ ಪೊಲೀಸರ ಕ್ರಮವನ್ನು ಖಂಡಿಸಿ ಸೋಮವಾರ ಬೆಳಗ್ಗೆ ಪಟ್ಟಣದ ಮೃತ್ಯುಂಜಯ ವೃತ್ತದಲ್ಲಿ ಒಂದು ಗಂಟೆಯ ಜಾಲ ಪ್ರತಿಭಟನೆ ಮಾಡಿ ರಸ್ತೆ ತಡೆ ಮಾಡಲಾಯಿತು. ಈ ರೀತಿ ರಾತ್ರೋರಾತ್ರಿ ಬಂಧಿಸಲು ರೈತರೆನಾದರೂ ದರೋಡೆಕೋರರೆ ಎಂದು ಪ್ರತಿಭಟನಾ ನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ನೂಕಾಟ – ತಳ್ಳಾಟ ನಡೆಯಿತಲ್ಲದೆ ಪೊಲೀಸರ ಕ್ರಮವನ್ನು ರೈತರು ತೀವ್ರವಾಗಿ ಖಂಡಿಸಿದರು.ಪ್ರತಿಭಟನೆಯಿಂದ ವಾಹನ ಸವಾರರು ಪರದಾಡುವಂತಾಯಿತು.

TV24 News Desk
the authorTV24 News Desk

Leave a Reply