ಬೆಳಗಾವಿ:ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಇಂದು ಮನಸ್ಮೃತಿ ದಹನ ಮಾಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ 1927 ಡಿಸೆಂಬರ್ 25 ರಂದು ಮನಸ್ಮೃತಿಯ ದಲಿತ ವಿರೋದಿ ಭಾಗಗಳನ್ನು ಸುಟ್ಟು ಹಾಕಿದ ದಿನ, ಜೊತೆಗೆ ಡೆಸೆಂಬರ್ 20 ರಂದು ದಲಿತ ಸಮುದಾಯದಿಂದ ಕೆರೆಯ ನೀರನ್ನು ಕುಡಿದ ದಿನ ಇಂತ ಮಹತ್ ಕಾರ್ಯ ನಡೆದಿದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ. ಅಂತ ಮಹನಿಯರನ್ನು ನೆನಯಲು ಹಾಗೂ ನಮ್ಮ ದಲಿತ ಚಳುವಳಿಯ ಪ್ರಾರಂಭದ ಹಂತವನ್ನು ಜಗತ್ತಿಗೆ ಸಾರುವು ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 25 ನ್ನು ಮನಸ್ಮೃತಿ ದಹನ ದಿನವನ್ನಾಗಿ, ದಲಿತ ಸಮುದಾಯದಲ್ಲು ಬದಲಾವಣೆಯಾದ ದಿನವಾಗಿ ಪ್ರತಿ ವರ್ಷ ಆಚರಿಸುತ್ತೇವೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ.ಕೆ.ಡಿ.ಮಂತ್ರೇಶಿ ಅವರು ಹೇಳಿದರು.
tv24plus.in > Blog > ಜಿಲ್ಲೆ > ಬೆಳಗಾವಿ > ದಲಿತರಲ್ಲಿ ಚಳುವಳಿಯ ಬೀಜ ಬಿತ್ತಿದ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ