ಬೆಳಗಾವಿ

ಹುಕ್ಕೇರಿಯಲ್ಲಿ ಸರಣಿ ಕಳ್ಳತನ 

ಹುಕ್ಕೇರಿ:ಹುಕ್ಕೇರಿ ಗೌಡವಾಡ ಗ್ರಾಮಗಳಲ್ಲಿ ಮನೆಗಳ್ಳತನ   ಪಟ್ಟಣದ ಬೆಳಗಾವಿ ಬೈಪಾಸ್ ರಸ್ತೆಯಲ್ಲಿ ನಿವೃತ್ತ ಮಿಸಲು ಪಡೆ ಪೆದೆ ಅಶೋಕ ಕಲಾಜ ಎಂಬವರ ಮನೆ ಬೀಗ ಮುರಿದು ಹತ್ತು ಸಾವಿರ ರೂಪಾಯಿ ನಗದು ಮತ್ತು ಐವತ್ತು ಗ್ರಾಂ ಬಂಗಾರ ಕಳ್ಳತನವಾಗಿದೆ,ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳರು ಶನಿವಾರ ರಾತ್ರಿ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.ಸ್ಥಳಕ್ಕೆ ಹುಕ್ಕೇರಿ ಇನ್ಸಪೇಕ್ಟರ ರಫೀಕ ತಹಸಿಲ್ದಾರ ಮತ್ತು ಸಿಬ್ಬಂದಿಗಳಾದ ಮಂಜುನಾಥ ಕಬ್ಬೂರಿ ಆಗಮಿಸಿ ಪರಶಿಲನೆ ಮಾಡಿ ಶ್ವಾನ ದಳ ಮತ್ತು ಬೆರಳಚ್ಚು ತಜ್ಞ ರನ್ನು ಕರೆಯಿಸಿ ತಪಾಸಣೆ ಕೈಕೊಂಡಿದ್ದಾರೆ. ಜನ ಬಿಡದಿ ಸ್ಥಳದಲ್ಲೇ ಮನೆ ಕಳ್ಳತನ ವಾಗಿದ್ದನ್ನು ಕಂಡು ಜನರು ಭಯಭೀತರಾಗಿದ್ದಾರೆ.ಇದೇ ರೀತಿ ಗೌಡವಾಡ ಗ್ರಾಮದಲ್ಲಿಯೂ ಕೂಡ ಮನಕಳ್ಳತನವಾಗಿದ್ದು ಬೆಳಗಿನ ಜಾವ ಸರಿ ಸುಮಾರು ನಾಲ್ಕು ಗಂಟೆಗೆ ಹುಕ್ಕೇರಿ ಮತ್ತು ಗೌಡವಾಡ ಗ್ರಾಮದಲ್ಲಿ ಏಕಕಾಲಕ್ಕೆ ಕಳ್ಳತನವಾಗಿದ್ದು ಇನ್ನೂ ಹುಕ್ಕೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TV24 News Desk
the authorTV24 News Desk

Leave a Reply