Uncategorized

ಬಡವರ ಬಾಳಿನಲ್ಲಿ ಆಶಾದೀಪವಾದ ಮುರಗೇಂದ್ರಗೌಡ ಪಾಟೀಲ ಪೌಂಡೇಶನ್

ಬೆಳಗಾವಿ:ಬೆಳಗಾವಿ ನಗರ ಹಾಗು ಹೊರವಲಯಗಳಲ್ಲಿ ದೀಪಾವಳಿ ಅಂಗವಾಗಿ ಮುರಗೇಂದ್ರಗೌಡ ಪಾಟೀಲ ಪೌಂಡೇಶನ್ ವತಿಯಿಂದ ಸಿಹಿ ತಿಂಡಿ ಹಾಗು ಬಟ್ಟೆ ವಿತರಿಸಲಾಯಿತು. ಹೌದು ಎಲ್ಲೆಲ್ಲೂ ಬೆಳಕನ್ನು ಹರಡುತ್ತಾ ಸಂಭ್ರಮದ ವಾತಾವರಣವನ್ನು ಹೆಚ್ಚಿಸುವ ಅತ್ಯಂತ ದೊಡ್ಡ ಹಬ್ಬ ದೀಪಾವಳಿ, ಕಳೆದ ಎರಡು ವರ್ಷದಿಂದ ಕರೋನಾ ಮಹಾಮಾರಿಯಿಂದ ದೀಪಾವಳಿ ಹಬ್ಬವನ್ನು ಅತಿ ಸರಳ ರೀತಿಯಿಂದ ಆಚರಿಸಲಾಗುತ್ತಿತ್ತು. ಆದರೆ ಈ ಸಲ ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನುಎಲ್ಲೆಡೆ ಅದ್ದೂರಿ ಹಾಗು ವಿಜೃಂಭಣೆಯಿಂದ ಆಚರಿಸಲಾಗುದ್ದು, ಈ ನಿಟ್ಟಿನಲ್ಲಿ ಬಡವರ ಆಶಾ ಕಿರಣರಾಗಿರುವ ಮುರಗೇಂದ್ರಗೌಡ ಪಾಟೀಲ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗು ಬಿಜೆಪಿ ಮುಖಂಡರಾದ ಮುರಗೇಂದ್ರಗೌಡ ಪಾಟೀಲ ಮನೆ ಮನೆಗೆ ತೆರಳಿ ಸಿಹಿ ತಿಂಡಿ ಹಾಗು ಬಟ್ಟೆಯನ್ನು ವಿತರಿಸಿದರು. ವೃತ್ತಿಯಲ್ಲಿ  ವಕೀಲರಾದ ಮುರಗೇಂದ್ರಗೌಡರು ತಮ್ಮನ್ನು ಹೋರಾಟ ಹಾಗು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಡಜನರ ಹಾಗು ಸಮಾಜಮುಖ ಏಳ್ಗೆಗಾಗಿ ಸದಾ ಶ್ರಮಿಸುವ ಶ್ರಮಜೀವಿಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಇವರ ರಾಜಕೀಯ ಜೀವನ ದೀಪಾವಳಿ ಬೆಳಕಿನ ಹಾಗೆ ಪ್ರಜ್ವಲಿಸಲಿ ಎಂಬುದು ಬೆಳಗಾವಿ ಜನರ ಬಯಕೆ

TV24 News Desk
the authorTV24 News Desk

Leave a Reply