Uncategorized

ಹಳೇ ವೈಷಮ್ಯಕ್ಕೆ ಬಿತ್ತು ಯುವಕನ ಹೆಣ ಹಿಡಕಲ್ ಡ್ಯಾಂ‌ ಬಳಿ ಗೋಕಾಕ್‌ ಯುವಕನ ಹತ್ಯೆ!

ಬೆಳಗಾವಿ:

ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಗೆಳೆಯರೊಂದಿಗೆ ಪಾರ್ಟಿ ಮಾಡಿ ಮನೆಗೆ ಹೊರಟವ ಸೇರಿದ್ದು ಮಸಣದ ಹಾದಿ ಹಿಡಿದಿದ್ದಾರೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಬಳಿ ಘಟನೆ ನಡೆದದ್ದು ಕೊಲೆಯಾದ ಯುವಕನನ್ನು ಫಾಸ್ಕಲ್ ಹೃದಯ್ ರಾಜ್ ಮುತ್ತುಸ್ವಾಮಿ(31) ಎಂದು ಗುರುತಿಸಲಾಗಿದೆ.ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಫಾಸ್ಕಲ್ ನನ್ನು ಕೊಲೆ ಮಾಡಿ ಗ್ಯಾಂಗ್ ಪರಾರಿಯಾಗಿದೆ.ಒಟ್ಟು
ಸುಮಾರು 11 ಜನರ ತಂಡ ಫಾಸ್ಕಲ್ ಕೊಲೆಯಲ್ಲಿ ಭಾಗಿಯಾಗಿದೆ ಎಂದು ಎಸ್ಪಿ ಕೆ ರಾಮರಾಜನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಮಾರಕಾಸ್ತ್ರಗಳಿಂದ ಫಾಸ್ಕಲ್ ಮೇಲೆ ದಾಳಿ ಮಾಡಿ ಗ್ಯಾಂಗ್ ಪರಾರಿಯಾಗಿದ್ದು ಮೃತ ಫಾಸ್ಕಲ್ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಾಣಿಕವಾಡಿ ನಿವಾಸಿ ಎಂದು ತಿಳಿದು ಬಂದಿದೆ.ಫಾಸ್ಕಲ್ ನಿಸರ್ಗ ಸೌಂದರ್ಯ ಸವಿಯೋಣ ಎಂದು ಗೆಳೆಯರೊಂದಿಗೆ ಹೋಗಿದ್ದ ಎನ್ನಲಾಗಿದೆ.ಈ ವೇಳೆ ಗಂಗಪ್ಪ ನಾಯಿಕ್,ರಾಹುಲ್,ನಾಗೇಶ್ ನಾಯಿಕ್,ಪ್ರಜ್ವಲ್, ಸೇರಿ ಇನ್ನಿತರರು ಸ್ಥಳಕ್ಕೆ ಬಂದು ಫಾಸ್ಕಲ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ
ಯಮಕನಮರಡಿ ಪೊಲೀಸರು ಏಳು ಜ‌ನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಕೊಲೆಯ ಹಿಂದಿನ ರಹಸ್ಯಗಳು ಇನ್ನೂ ಹೊರಬರಬೇಕಿದ್ದು ಕೊಲೆ ಆರೋಪಿಗಳನ್ನು ಬಾಯ್ ಬಿಡಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ.

TV24 News Desk
the authorTV24 News Desk

Leave a Reply