ರಾಮದುರ್ಗ: ರಾಮದುರ್ಗ ತಾಲೂಕಿನ ಶಿವಪೇಠ ಗ್ರಾಮದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಶ್ರೀ ಮಾರುತಿ ದೇವರ ಹತ್ತನೇ ವರ್ಷದ ಅದ್ದೂರಿ ಪಲ್ಲಕ್ಕಿ ಉತ್ಸವ ಹಾಗೂ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಇಂದು ಸಂಸದೆ ಮಂಗಳಾ ಅಂಗಡಿ ಅವರು ಭಾಗವಹಿಸಿ ದೇವರ ಆಶಿರ್ವಾದ ಪಡೆದು ಎಲ್ಲರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಹಾಗೂ ಬಿಜೆಪಿ ಯುವ ಮುಖಂಡರಾದ ಮಲ್ಲಣ್ಣ ಯಾದವಾಡ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿಗಳಾದ ಶೋಭಾ ನಗರಿ, ತಾಲೂಕ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಹಾದೇವಿ ರಾ ಗುರುಬಸಣ್ಣವರ, ಪತ್ರಕರ್ತರಾದ ಶಿವಾನಂದ ಗುರುಬಸಣ್ಣವರ, ಶಿವಾನಂದ ಆಲೂರು, ಹಿರಿಯರಾದ ಮಲ್ಲಪ್ಪ ಕಾತರಕಿ, ಎಂ.ಡಿ ಚನ್ನಪ್ಪನವರ್, ಬಸಣ್ಣ ಸುಮಗೊಂಡ ಹಾಗೂ ಶ್ರೀ ಗಜ ಹನುಮ ಯುವ ಪೌಂಡೇಶನ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮದ ಯುವಕರು ಭಾಗಿಯಾಗಿದ್ದರು.