ಬೆಳಗಾವಿಬೆಳಗಾವಿ ನಗರ

ನಮ್ಮ ಸಾಹುಕಾರ್ ಹೆಸರು ತೆಗೆದರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ  

ಬೆಳಗಾವಿ : ಇಂದು ಗೋಕಾಕ್ ನಲ್ಲಿ 2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಸಮಾವೇಶ ನಡೆಯಲಿದ್ದು, ಶಾಸಕ ಸತೀಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಓಪನ್ ಚಾಲೆಂಜ ಮಾಡಿದ್ದಾರೆ.
2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಸಮಾವೇಶಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. 2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ವಿಷಯದ ಬಗ್ಗೆ ಮಾತಾಡಿ ಅದನ್ನು ಬಿಟ್ಟು ಸಮಾವೇಶದಲ್ಲಿ ಸತೀಶ್ ಜಾರಕಿಹೊಳಿ ಬಗ್ಗೆ ಇಲ್ಲದ ಸಲ್ಲದ ಮಾತನಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಶಾಸಕ ಸತೀಶ್ ಜಾರಕಿಹೊಳಿ  ಬೆಂಬಲಿಗರು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೆ ವಾರ್ನಿಂಗ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿ.ವೈ ವಿಜಯೇಂದ್ರ ರೀತಿ ನಮ್ಮ ಸಾಹುಕಾರ್ ಬಗ್ಗೆ ಮಾತನಾಡಿದ್ರೆ ಗೋಕಾಕ್ ನಿಂದ ವಾಪಸ್ ಹೋಗುವುದು ಕಷ್ಟವಾಗುತ್ತದೆ. ಬಂದ ಪುಟ್ಟ ಹೋದ ಪುಟ್ಟ ತರ ಇರಬೇಕು. ಅದನ್ನು ಬಿಟ್ಟು ನಾಟಕ ಮಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ, ಧಮ್, ತಾಕತ್ ಇದ್ರೆ ನಮ್ ಸಾಹುಕಾರ್ ಹೆಸರು ಹೇಳು ನೋಡೋಣ ಎಂದು ಎಚ್ಚರಿಕೆ ನೀಡಿದ್ದಾರೆ.
TV24 News Desk
the authorTV24 News Desk

Leave a Reply