
ಬೆಳಗಾವಿ:
ಫಯರ್ ಬ್ರಾಂಡ್ ಶಾಸಕ ಅಂತಲೇ ಹೆಸರು ಪಡೆದಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಪಕ್ಷ ಉಚ್ಛಾಟನೆ ಮಾಡಿದೆ. ಕೇಂದ್ರ ಶಿಸ್ತು ಸಮೀತಿ ಆರು ವರ್ಷಗಳ ಕಾಲ ಯತ್ನಾಳರನ್ನು ಉಚ್ಛಾಟನೆ ಮಾಡಿದ್ದಾರೆ. ಕೇಂದ್ರ ಶಿಸ್ತು ಸಮೀತಿಯ ಕಾರ್ಯದರ್ಶಿ ಓಂ ಪಾಟಕ್ ಅವರು ಆರು ವರ್ಷ ಯತ್ನಾಳರನ್ನು ಉಚ್ಛಾಟಿಸಿ ಆದೇಶ ಹೊರಡಿಸಿದ್ದಾರೆ. ಪಕ್ಷದ ಕೇಂದ್ರ ಶಿಸ್ತು ಸಮೀತಿ 10 ನೇ ಫೆಬ್ರುವರಿ 2025 ಕ್ಕೆ ಯತ್ನಾಳ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಅದಕ್ಕೆ ಯತ್ನಾಳ ಅವರು ಉತ್ತರಿಸಿಲ್ಲ ಎಂದು ತಿಳಿದು ಬಂದಿದೆ.ಅದರಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದಲೆ ಜಾರಿಗೆ ಬರುವಂತೆ ಯತ್ನಾಳರನ್ನು ಉಚ್ಛಾಟನೆ ಮಾಡಲಾಗಿದೆ.ಇನ್ನು ಯತ್ನಾಳ ಉಚ್ಛಾಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಯತ್ನಾಳ ಅವರ ಮೇಲೆ ನಾನು ದೂರು ಕೊಟ್ಟಿರಲಿಲ್ಲ ಎಂದು ಪ್ರತಿಕ್ರಿಯೇ ನೀಡಿದ್ದಾರೆ. ಯತ್ನಾಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಯಕರೂ ಸಹ ಈ ಬೆಳವಣಿಗೆಯಿಂದ ಮೌನಕ್ಕೆ ಜಾರಿದ್ದಾರೆ. ಸಧ್ಯ ಯತ್ನಾಳ ಅವರು ಯಾವ ನಿರ್ಧಾರಕ್ಕೆ ಬರುತ್ತಾರೆ ಎನ್ನುವುದು ಕುತೂಹಲದ ಕೇಂದ್ರ ಬಿಂದುವಾಗಿದೆ.