ಬೆಳಗಾವಿ: ಬೆಳಗಾವಿಯ ಮೂರನೆಯ ರೈಲ್ವೆ ಗೇಟ್ ಬಳಿ ನಿರ್ಮಿಸಲಾಗಿರುವ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ಲೋಕಾರ್ಪಣೆಯ ನಂತರ ರೋಡ್ ಲೈಟ್ ವ್ಯವಸ್ಥೆ ಇರಲಿಲ್ಲ. ಇದನ್ನು ಮಾದ್ಯಮಗಳು ವರದಿ ಮಾಡಿದ ನಂತರ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು, ದಾರಿ ದೀಪದ ವ್ಯವಸ್ಥೆ ಮಾಡಿದ್ದರು. ಆದರೆ ಮತ್ತೆ ಅದೇ ಸಮಸ್ಯೆ ಎದುರಾಗಿದ್ದು, ಮಂಗಳವಾರ ರಾತ್ರಿ ಈ ಮೇಲ್ಸೇತುವೆ ರಸ್ತೆಯಲ್ಲಿ ಕತ್ತಲು ಆವರಿಸಿರುವ ದೃಶ್ಯಗಳು ಕಂಡು ಬಂದವು. ಮತ್ತೆ ಇಲ್ಲಿ ರೋಡ್ ಲೈಟ್ಸ್ ಇಲ್ಲದಂತಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಜನ ಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಸ್ಮಾರ್ಟ್ ಸಿಟಿಯಲ್ಲಿ ಮಾಡಿದ ಕೆಲಸಗಳು ಹೆಚ್ಚು ಕಾಲ ಯಾವಾಗ ಸ್ಮಾರ್ಟ್ ಆಗಿ ಉಳಿಯುತ್ತವೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಅದರಲ್ಲೂ ಈ ರೈಲ್ವೆ ಓವರ್ ಬ್ರಿಡ್ಜ್ ಉದ್ಘಾಟನೆಯಾದ ನಂತರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗೆ ಸುದ್ದಿಯಾಗುತ್ತಲೇ ಇರೋದು ಬೇಸರದ ಸಂಗತಿ, ಈಗಲಾದರೂ ಅಧಿಕಾರಿಗಳು ಎಚ್ಛೆತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಮುಂದಾಗಬೇಕೆನ್ನುವುದು ಬೆಳಗಾವಿ ನಗರ ಜನರ ಬಯಕೆ.
tv24plus.in > Blog > ಜಿಲ್ಲೆ > ಬೆಳಗಾವಿ > ಬೆಳಗಾವಿ ಸಿಟಿ ಸ್ಮಾರ್ಟ್ ಸಮಸ್ಯೆಗಳು ಸ್ಮಾರ್ಟ್…!