ಸಂಕೇಶ್ವರ : ಕರ್ನಾಟಕ ರಕ್ಷಣಾ ವೇದಿಕೆ,ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ರಾಜ್ಯೋತ್ಸವವನ್ನು ಇಂದು ನಾಡ ದೇವತೆ ಭುವನೇಶ್ವರಿ ಭಾವ ಚಿತ್ರಕ್ಕೆ ನಿಡಸೋಸಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಹಿರಿಯರಾದ ಅಪ್ಪಾಸಾಹೇಬ ಶಿರಕೋಳಿ ಪೂಜೆ ಸಲ್ಲಿಸಿ ದ್ವಜಾರೋಹಣ ನೆರವೇರಿಸಿ ಮೆರವಣೆಗೆ ಚಾಲನೆ ನೀಡಿದರು. ಜಾನಪದ ನೃತ್ಯಗಳಾದ ಝಾಂಜ ಪತಾಕ, ಕೋಲಾಟ, ಡೋಳ್ಳು ಕುಣಿತ, ಲೇಜಿಮ್ ಮೋದಲಾದ ಜಾನಪದ ಕಲೆಗಳನ್ನು ಯುವಕರು,ಯುವತಿಯರು ಮೆರವಣೆಗೆ ಯುದ್ಧಕ್ಕೂ ಪ್ರದರ್ಶಿಸಿದರು.
ಇಂದು ಬೆಳಿಗ್ಗೆ ಯಿಂದ ವಿವಿಧ ನಗರಗಳಿಂದ ಆಗಮಿಸಿದ ಕನ್ನಡಾಭಿಮಾನಿಗಳು ಯುವಕರ ತಂಡ ಡಿ ಜೆ ಸಂಗೀತಕ್ಕೆ ತಾಳ ಹಾಕಿ ಕುಣಿತದು ಕುಪ್ಪಳಿಸಿದರು.ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷೆ ಸೀಮಾ ಹತನೂರೆ, ಉಪಾಧ್ಯಕ್ಷ ಅಜಿತ ಕರಜಗಿ, ಸ್ಥಾಯಿ ಸಮಿತಿ ಅದ್ಯಕ್ಷ ಸುನಿಲ ಪರ್ವತರಾವ, ಸಾಹಿತಿ ಪ್ರೋ ಚಂದ್ರಶೇಖರ ಅಕ್ಕಿ, ಕರವೇ ಜಿಲ್ಲಾಘಟಕದ ಅಧ್ಯಕ್ಷ ಮಹೇಶ ಹಟ್ಟಿಹೋಳಿ, ಪ್ರಮೋದ ಹೋಸಮನಿ , ದೀಲಿಪ ಹೋಸಮನಿ, ಸಂತೋಷ ಮುಡಸಿ, ರಾಜ್ಯೋತ್ಸವ ಸಮಿತಿ ಅದ್ಯಕ್ಷ ಪ್ರೀತಂ ಸುಮಾರೆ,ಬಂಡು ಹತನೂರೆ, ಉಪಾಧ್ಯಕ್ಷ ಆನಂದ ಹರಗಾಪೂರೆ, ಪ್ರಶಾಂತ ಮನ್ನಿಕೇರಿ, ಸಂತೋಷ ಸತ್ಯನಾಯಿಕ ಮೊದಲಾದವರು ಉಪಸ್ಥಿತರಿದ್ದರು.