ಬೆಳಗಾವಿ

ರಸ್ತೆ ದುರಸ್ಥಿಗೆ ಆಗ್ರಹಿಸಿ  ಜಿಲ್ಲಾಧಿಕಾರಿಗಳಿಗೆ ಮನವಿ 

 ಬೆಳಗಾವಿ : ಖಾನಾಪುರ ತಾಲೂಕಿನ ಚಿಕಲೆ-ಅಮಗಾಂವ ಆರೂವರೆ ಕಿ.ಮೀ. ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಈಗಾಗಲೇ ಚಿಕಲೆ ಗ್ರಾಮದ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆದರೆ ಚಿಕಲೆ ಗ್ರಾಮದ ಅಮಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ 25 ವರ್ಷದ ಹಿಂದೆ ಸರ್ಕಾರದಿಂದ ಮಂಜೂರಾದ್ರೂ ಕೇವಲ ಮೆಟಲಿಂಗ್ ಮಾತ್ರ ಮಾಡಿ ಬಿಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಈ ರಸ್ತೆ ದುರಸ್ಥಿಗೆ ಯಾರೂ ಮುಂದಾಗಿಲ್ಲ. ಈಗ ರಸ್ತೆಯಲ್ಲಿ ತೆಗ್ಗು, ಗುಂಡಿಗಳು ಮಳೆಗಾಲದಲ್ಲಿ ಇಡೀ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ. ಇದರಿಂದ ಸಾರ್ವಜನಿಕರು ಕೆಲಸ ನಿಮಿತ್ಯ ಬೇರೆ ಗ್ರಾಮಗಳಿಗೆ ತೆರಳಲು, ಶಾಲಾ ಮಕ್ಕಳು ಶಾಲೆಗೆ ಹೋಗಲು, ಅನಾರೋಗ್ಯ ಪಿಡೀತರು, ಗರ್ಭಿಣಿಯರು ಆಸ್ಪತ್ರೆಗೆ ಹೋಗಲು ಗ್ರಾಮಕ್ಕೆ ಆಂಬುಲೇನ್ಸ ಬರಲು ಕೂಡ ಸಾಧ್ಯವಾಗುತ್ತಿಲ್ಲ. ಅದೇ ರೀತಿ ಬೈಕ್‍ಗಳು, ಖಾಸಗಿ ವಾಹನಗಳು ಓಡಾಡಲೂ ಕೂಡ ಬಹಳಷ್ಟು ಸಮಸ್ಯೆ ಆಗುತ್ತಿದೆ. ಚಿಕಲೆ ಅಮಗಾಂವ ರಸ್ತೆಯನ್ನು ದುರಸ್ಥಿ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡೆ ಡಾ.ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸೋನಾಲಿ ಸರ್ನೋಬತ್ ತಕ್ಷಣವೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಚಿಕಲೆ ಅಮಗಾಂವ ರಸ್ತೆಯನ್ನು ದುರಸ್ಥಿ ಮಾಡಬೇಕೆಂದು  ಆಗ್ರಹಿಸಿದರು.

 

TV24 News Desk
the authorTV24 News Desk

Leave a Reply