ಬೆಳಗಾವಿ

ಖಾನಾಪುರ ; ಎಗ್ಗಿಲ್ಲದೆ ಸಾಗಿದೆ ಕಳ್ಳಬಟ್ಡಿ ದಂಧೆ

ಖಾನಾಪುರ: ತಾಲೂಕಿನ ಕಾಟಗಾಳಿ ಸಂರಕ್ಷಣಾ ಅರಣ್ಯ ಪ್ರದೇಶದಲ್ಲಿ ಕಳ್ಳಬಟ್ಟಿ ಧಂಧೆ ಎಗ್ಗಿಲ್ಲದೆ ಸಾಗಿದ್ದು ಕಡಿವಾಣ ಹಾಕಬೇಕಾದ ಅಧಿಕಾರಿಗಳು ಇದರ ಬಗ್ಗೆ ಚಕಾರ ಎತ್ತದಿರುವದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರಕಾರ ಕಳ್ಳಬಟ್ಟಿ ದಂಧೆಯನ್ನು ಸಂಪೂರ್ಣ ನಿಶೇದಿಸಿದ್ದರೂ ಅಕ್ರಮ ದಂದೆಕೋರರು ಎಗ್ಗಿಲ್ಲದೆ ರಾಜಾರೋಶವಾಗಿ ದಂದೆ ಮುಂದುವರೆಸಿದ್ದಾರೆ.

ಕಾಟಗಾಳಿ ಮುಖ್ಯ ರಸ್ತೆಗೆ ಹೊಂದಿಕೊಂಡತೆ ಇರುವ KFDC ಯ 1017-18 ನೇ ಸಾಲಿನ ನೆಡತೋಪಿಗೆ ಹೊಂದಿಕೊಂಡಿರುವ ಹಳ್ಳದ ದಂಡೆಯಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಜಾಣಕುರುಡ ವಹಿಸಿರುವದು ಹಲವು ಅನುಮಾನಗಳಿಗೆ ಎಡಮಾಡಿಕೊಟ್ಡಿದೆ.ಅಲ್ಲದೆ ದುಡ್ಡು ಉಳಿಸುವ ಕಾರಣದದಿಂದ ಕಳ್ಳಬಟ್ಟಿ ಸೇವಿಸಿ ಯಾರದಾದರೂ ಜೀವಕ್ಕೆ ಹೆಚ್ಚುಕಮ್ನಿಯಟದಲ್ಲಿ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಇದಕ್ಕೆಲ್ಲ ಕಡಿವಾಣ ಹಾಕಿ ಸಂಬಂದಪಟ್ಟ ಹಾಗೂ ಅಕ್ರಮ ದಂದೆಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

TV24 News Desk
the authorTV24 News Desk

Leave a Reply