ಬೆಳಗಾವಿ:
ರಾಜ್ಯಕ್ಕೆ ಸುರ್ಜೇವಾಲ ಎಂಟ್ರಿಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೇ ನೀಡಿದ್ದಾರೆ.ಶಾಸಕರ ಜೊತೆಗೆ ಸುರ್ಜೇವಾಲಾ ಸಭೆ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದು ಉದ್ದೇಶ ಎನಿದೆ ಅವರನ್ನೆ ಕೇಳಬೇಕು ಎಂದಿದ್ದಾರೆ ಶಾಸಕರ ಸಮಸ್ಯೆ ಎನಿದೆ ಅನ್ನೋದು ಕೇಳಬೇಕಿದೆ ಪದೇ ಪದೇ ಯಾಕೆ ಸರ್ಕಾರದ ವಿರುದ್ಧ ಮಾತಾಡ್ತಿದೀರಿ ಅಂತಾ ಕೇಳ್ತಾರೆ. ಸಮಸ್ಯೆ ಎನಿದ್ರೂ ಅವರ ಮುಂದೆ ಹೇಳಿಕೊಳ್ಳಲು ಸಭೆ ಮಾಡ್ತಿದ್ದಾರೆ ಶಾಸಕರ ಸಮಸ್ಯೆ ಆಲಿಸಿ ಅದನ್ನ ಸರಿ ಮಾಡ್ತಾರೆ ಎಂದಿದ್ದಾರೆ. ಅಲ್ಲದೆ ಸಭೆಗೆ ರಾಜು ಕಾಗೆ ಗೈರು ವಿಚಾರಕ್ಕೆ ಸಂಬಂಧಪಟ್ಟಂತೆ
ಇಂದು ಬೆಳಗಾವಿಯಲ್ಲಿ ಸಭೆ ಇತ್ತು ಇಲ್ಲೂ ಕೂಡ ಇಂಪಾರ್ಟೆಂಟ್ ಮೀಟಿಂಗ್ ಇತ್ತು ಹೀಗಾಗಿ ನಾಳೆ ಹೋಗಿ ಸುರ್ಜೇವಾಲಾ ಅವರನ್ನ ಭೇಟಿ ಆಗ್ತಾರೆ ಸುರ್ಜೇವಾಲಾ ಅವರು ಇನ್ನು ಎರಡು ದಿನ ಇರ್ತಾರೆ ನಮಗೆ ಕರೆದಿಲ್ಲ ನಾವು ಭೇಟಿ ಆಗುವುದಿಲ್ಲ ಅವಶ್ಯಕತೆ ಬಿದ್ರೇ ನೋಡೋಣ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.


