ಕುಡಚಿ: ಸಾಂಬ್ರಾದ ಕೆ.ಎಸ್.ಐ.ಎಸ್.ಎಫ್ ನಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುವ ಬಸಪ್ಪ ರಂಗಪ್ಪ ಬಳನೊಕಿ ಎಂಬಾತ ತನ್ನ ನಾಲ್ಕು ತಿಂಗಳ ಮಗುವನ್ನು ರಸ್ತೆಗೆ ಎಸೆದು ಕೊಲೆ ಮಾಡಿರುವ ಘಟನೆ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.
ಮೂಡಲಗಿ ತಾಲೂಕಿನ ದುರದುಂಡಿ ಗ್ರಾಮದ ಪೇದೆ ಬಸಪ್ಪ ತನ್ನ ಪತ್ನಿಯನ್ನು ಕರೆ ತರಲು ಆಕೆಯ ತವರೂರ ರಾಯಬಾಗ ತಾಲ್ಲೂಕಿನ ಚಿಂಚಲಿಗೆ ಸೆ.18 ರಂದು ತೆರಳಿದ್ದನು. ನಿನ್ನೆ ಗಣೇಶ ಚತುರ್ಥಿ ಇದ್ದು, ನಾಳೆ ಬರುವುದಾಗಿ ಪತ್ನಿ ಹೇಳಿದ್ದಕ್ಕೆ ಸಿಟ್ಟಿನಿಂದ ತನ್ನ 4 ತಿಂಗಳ ಮಗು ಸಂಜೀತ ಎಂಬಾತನನ್ನು ಮನೆ ಹಿಂಬದಿಯ ಡಾಂಬರ್ ರಸ್ತೆ ಮೇಲೆ ಜೋರಾಗಿ ಎಸೆದಿದ್ದರಿಂದ ಭಾರೀ ಪೆಟ್ಟಾಗಿ ಮಗು ಸಾವನ್ನಪ್ಪಿದೆ. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.