ಸ್ಥಳಕ್ಕೆ ಆಗಮಿಸಿ ವಿಷಯ ತಿಳಿಗೊಳಿಸಿದ ಪೊಲೀಸರು
ಬೆಳಗಾವಿ: ಮಂಗಳವಾರ ರಾತ್ರಿ ಕುಂದಾನಗರಿ ಬೆಳಗಾವಿಯಲ್ಲಿ ಗಣಪತಿ ಆಗಮನದ ಸಂಭ್ರಮ ಮನೆ ಮಾಡಿತ್ತು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಿತ್ತು. ಈ ವೇಳೆ ಶಿವಾಜಿ ನಗರದ ಪ್ರಧಾನ ಗಲ್ಲಿಯಲ್ಲಿ ಗಣೇಶೋತ್ಸವ ಮಂಡಳಿಯ ಗಣಪತಿ ಆಗಮನದ ವೇಳೆ ಕಿರಿಕ್ ಆಗಿದ್ದು ಬೇಸರದ ಸಂಗತಿ. ವಿಷಯ ತಿಳಿಯುತ್ತಿದ್ದಂತೆ ಮಾರ್ಕೆಟ್ ಪೊಲೀಸ್ ಠಾಣೆಯ ಉಪ ನಿರೀಕ್ಷಕ ವಿಠ್ಠಲ ಅವರು ಆಗಮಿಸಿ ತಿಳಿ ಹೇಳಿ ಪರಿಸ್ಥಿತಿ ತಿಳಿಗೊಳಿಸಿದ ನಂತರ ಕಾರ್ಯಕ್ರಮ ಸರಾಗವಾಗಿ ನೆರವೇರಿತು.