ಬೆಳಗಾವಿಬೆಳಗಾವಿ ನಗರ

ನಗರ ವಿಸ್ತರಣೆ ಬುಡಾದಿಂದ ರೈತರಿಗೆ ನೋಟಿಸ್..! 

ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಬರುವ 28 ಗ್ರಾಮಗಳನ್ನು ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆ ಮಾಡಿ ನಗರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕಲಕಾಂಬ, ಮುಚ್ಚಂಡಿ, ಕಡೊಲಿ ಗ್ರಾಮದ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಇದರಿಂದಾಗಿ ಹೊಸ ಬಡಾವಣೆ, ಹೊಸ ಕೈಗಾರಿಕೆಗಳಿಗಾಗಿ ರೈತರು ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ.ಕಣಬರಗಿ ಈಗಾಗಲೇ ಬುಡಾ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಆಗಿದೆ. ಪರಿಹಾರ ಸಂಬಂಧ ರೈತರು ಹಾಗೂ ಬುಡಾ ನಡುವೆ ಸಂಘರ್ಷ ನಡೆಯುತ್ತಿದೆ. ಹೈಕೋರ್ಟ್​ನಲ್ಲಿ ಕೇಸ್​ ಇರುವುದರಿಂದ ರೈತರು ಹೈರಾಣಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕ್ಷೇತ್ರದ ಕಲಕಾಂಬ, ಮುಚ್ಚಂಡಿ, ಕಡೊಲಿ ಗ್ರಾಮಗಳು ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸಾಂಬ್ರಾ, ಮುತಗಾ, ಬಾಳೇಕುಂದ್ರಿ, ಶಿಂಧೋಳಿ, ಕೊಂಡಸಕೊಪ್ಪ ಗ್ರಾಮಗಳು ಸೇರಿವೆ.ದಾಖಲಾರ್ಹ ಸಂಗತಿಯೆಂದರೆ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಅನುಮತಿ ಕಡ್ಡಾಯವಾಗಿದೆ. ಗ್ರಾಮದ 250 ಮೀಟರ್ ವಿಸ್ತೀರ್ಣ ಹೊರತುಪಡಿಸಿ ಉಳಿದ ಭೂಮಿ ಏನೇ ಮಾಡಿದರೂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಇದೇ ಹಾದಿಯಲ್ಲಿ ಈಗ ಬರೋಬ್ಬರಿ 28 ಗ್ರಾಮಗಳಲ್ಲಿ ರೈತರು ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೂಡಲೇ ನೋಟಿಸ್ ವಾಪಸ್ ಪಡೆಯುವಂತೆ ರೈತರಿಂದ ಎಚ್ಚರಿಕೆ ಹೊರಬಿದ್ದಿದೆ. 
TV24 News Desk
the authorTV24 News Desk

Leave a Reply