ಬೆಳಗಾವಿ: ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿಯವರು, ಬಸ್ ಯಾತ್ರೆ ಮುಖ್ಯ ಉದ್ದೇಶ ಪ್ರಸ್ತುತ ಬಿ.ಜೆ.ಪಿ ಸರ್ಕಾರ ಮಾಡುತ್ತಿರುವ ಹಗರಣಗಳು, ಭ್ರಷ್ಟಾಚಾರ, ಕೃಷ್ಣ, ಮಹಾದಾಯಿ ನದಿ ವಿಚಾರ ಹಾಗೂ ಜನರನ್ನು ತಪ್ಪು ದಾರಿ ಹಿಡಿಸುತ್ತಿರುವುದನ್ನು ಬಹಿರಂಗ ಪಡಿಸುವಿದಾಗಿದೆ ಎಂದರು.
ಕೃಷ್ಣ ಮಹಾದಾಯಿ ವಿಚಾರವನ್ನು ಬಗೆಹರಿಸುತ್ತೇವೆ ಎಂದು ಬರಿ ಆಶ್ವಾಸನೆ ನೀಡುತ್ತವೆ ಬಿ.ಜೆ.ಪಿ ಸರ್ಕಾರ ಬಂದಿದೆ. ಅದನ್ನು ಅವರು ಬಗೆಹರಿಸುವುದಿಲ್ಲ. ಅದನ್ನು ಬಗೆಹರಿಸುವವರು ನಾವೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದರು.