ವಿಜಯಪುರ : ವಿಜಯಪುರ ನಗರದಲ್ಲಿ ಗುರುವಾರ ನಸುಕಿನ ಜಾವ ಭೂಮಿ ಕಂಪಿಸಿದೆ. ಲಘು ಭೂಕಂಪವಾಗಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಗುರುವಾರ ಬೆಳಿಗ್ಗೆ 1.38 ರ ಸುಮಾರಿಗೆ 3.4 ರಷ್ಟು’ ತೀವ್ರತೆ ಹೊಂದಿದ ಭೂಕಂಪನ ಸಂಭವಿಸಿದೆ. ಜನರು ಗಾಢ ನಿದ್ರೆಯಲ್ಲಿವುದರಿಂದ ಭೂಕಂಪನದ ಅನುಭವ ಬಹುತೇಕರಿಗೆ ಆಗಿಲ್ಲ. ಹೀಗಾಗಿ ಜನರು ಆತಂಕಗೊಂಡು ಮನೆಯಿಂದ ಓಡಿ ಹೊರಗೆ ಬಂದಿಲ್ಲ, ಈ ಮೊದಲು ಇದೆ ರೀತಿ ಘಟನೆ ಸಂಭವಿಸಿದಾಗ ಭೂಕಂಪನದ ಅನುಭವದಿಂದಾಗಿ ಜನ ಮನೆಯಿಂದ ಹೊರ ಓಡಿ ಬಂದಿದ್ದಾರೆ.
ವಿಜಯಪುರ ನಗರ, ಐನಾಪುರ, ಕತಕನಹಳ್ಳಿ, ಹಿಟ್ನಳ್ಳಿ ಸೇರಿದಂತೆ ಬಹುತೇಕ ಕಡೆ ಕಂಪನದ ಅನುಭವವಾಗಿದೆ. ಭೂಮಿಕಂಪಿಸಿದ ಹಿನ್ನಲೆ ಗುಮ್ಮಟ ನಗರಿ ಜನತೆ ಬೆಚ್ಚಿಬಿದ್ದಿದ್ದಾರೆ.
ಭೂಕಂಪದ ಘಟನೆ ರಿಕ್ಟರ್ ಮಾಪನ ಕೇಂದ್ರದಲ್ಲಿ ದಾಖಲಾಗಿರುವುದನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ದೃಢಪಡಿಸಿದ್ದಕ್ಕಾಗಿ, ಜಿಲ್ಲಾಡಳಿತ ಖಚಿತ ಪಡಿಸಿದೆ.