ಬೆಳಗಾವಿಬೆಳಗಾವಿ ನಗರ

ಬುಡಾ ಹಗರಣ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ: ರಾಜಕುಮಾರ ಟೋಪಣ್ಣವರ

ಬೆಳಗಾವಿ: ಬುಡಾ ಮ್ಯಾನವಲ್ ಹಗರಣದ ವರದಿಯನ್ನು‌ ಜಿಲ್ಲಾಡಳಿತ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸುವಂತೆ ಆಗ್ರಹಿಸಿ ಸೋಮವಾರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬುಡಾ ಮ್ಯಾನವಲ್ ಹಗರಣದ ಬಗ್ಗೆ ಲೋಕಾಯುಕ್ತ, ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿದ್ದೇವು. ನಗರಾಭಿವೃದ್ಧಿ ಇಲಾಖೆಯವರು ಜಿಲ್ಲಾಡಳಿತಕ್ಕೆ ಪತ್ರ ಬರೆದು ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚನೆ‌ ನೀಡಿದ್ದರು. ಅದೇ ರೀತಿ ಲೋಕಾಯುಕ್ತರು ನಮ್ಮ ದೂರು ಸ್ವೀಕರಿಸಿದ್ದಾರೆ. ಆದರೆ ಇಲ್ಲಿಯವರೆ ಪ್ರಾಥಮಿಕ ತನಿಖೆ ನಡೆಸಿಲ್ಲ. ಆದ್ದರಿಂದ ಬುಡಾ ಅಧಿಕಾರಿಗಳು ದಾಖಲೆಗಳನ್ನು ಸೃಷ್ಟಿಸುವುದು, ವಿಡಿಯೋ ಗ್ರಾಫಿ ಮಾಡಿ ಈ ಪ್ರಕರಣ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತಕ್ಷಣ ಜಿಲ್ಲಾಧಿಕಾರಿಗಳು ಬುಡಾ ಮ್ಯಾನವಲ್ ಆಕ್ಷನ ಬಗ್ಗೆ ವರದಿ ಸಲ್ಲಿಸಬೇಕು. ಲೋಕಾಯುಕ್ತರು ಪ್ರಾಥಮಿಕ ತನಿಖೆ ನಡೆಸುವವರೆಗೂ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ರಾಜಕುಮಾರ ಟೋಪಣ್ಣವರ, ಆಮ್ ಆದ್ಮಿ ಮುಖಂಡ, ಶಂಕರ ಹೆಗಡೆ, ಎಂ.ಕೆ.ಸೈಯದ್, ಜುನೈದ್ ಖಾನ್ ಸೇರಿದಂತೆ ‌ರೈತ‌ ಮುಖಂಡರು ಹಾಜರಿದ್ದರು.
TV24 News Desk
the authorTV24 News Desk

Leave a Reply