ಬೆಳಗಾವಿ

ಕಬ್ಬಿನ ಗದ್ದೆಗೆ ಬೆಂಕಿ: ಅಪಾರ ಪ್ರಮಾಣದ ಬೇಳೆ ನಾಶ

ರಾಮದುರ್ಗ: ಆಕಸ್ಮಿಕವಾಗಿ ಕಬ್ಬಿನ ಗದ್ದೆಗಳಿಗೆ ಬೆಂಕಿ ತಗುಲೀ ಅಪಾರ ಪ್ರಮಾಣದ ಬೆಳೆ ನಾಶಗೊಂಡು ತಾಲೂಕಿನ ದಾಡಿಬಾಂವಿ ತಾಂಡಾದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.‌

ಹೌದು.. ತಾಲೂಕಿನ ದಾಡಿಬಾಂವಿ ತಾಂಡಾದ ರೈತರಿಗೆ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಮಲ್ಲಣ್ಣ ಯಾದವಾಡ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದ್ದಾರೆ. ದಾಡಿಬಾಂವಿ ತಾಂಡಾದ ದೇಶಪ್ಪ ಲಮಾಣಿ ಅವರ 4 ಎಕರೆ, ಆನಂದ್ ಲಮಾಣಿ ಅವರ 2 ಎಕರೆ, ಬಾಲಪ್ಪ ಲಮಾಣಿ 1 ಎಕರೆ , ಕಾಳಪ್ಪ ಲಮಾಣಿ 2 ಎಕರೆ ಸೇರಿದಂತೆ ಒಟ್ಟು 9 ಎಕರೆ ಕಬ್ಬು ನಾಶವಾಗಿದೆ.

ಈ ಘಟನೆಯಲ್ಲಿ ರಾಮಪ್ಪ ಲಮಾಣಿ 2 ಎಕರೆ ಕೃಷ್ಣಪ್ಪ ಲಮಾಣಿ 3 ಎಕರೆ ಡ್ರಿಪ್ ಪೈಪುಗಳು ಸುಟ್ಟು ಕರಕಲಾಗಿವೆ. ಕಬ್ಬಿನ ಹೊಲಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಕಾರ್ಖಾನೆಯ ಅಧ್ಯಕ್ಷರು ಕಬ್ಬು ಕಟಾವ್ ಗ್ಯಾಂಗ್ ಕರೆಸಿ ,ಸುಟ್ಟ ಕಬ್ಬನ್ನು ತಕ್ಷಣವೇ ಕಾರ್ಖಾನೆಗೆ ಸಾಗಿಸುವ ವ್ಯವಸ್ಥೆ ಮಾಡಿ ಮಾನವಿಯತೆ ಮೆರೆದಿದ್ದಾರೆ .

TV24 News Desk
the authorTV24 News Desk

Leave a Reply