ಬೆಳಗಾವಿಬೆಳಗಾವಿ ನಗರ

ಭ್ರಷ್ಟಾಚಾರ ಅಂದ್ರೇ ಕಾಂಗ್ರೆಸ್ : ಸಿಎಂ ಬೋಮ್ಮಾಯಿ ವಾಗ್ದಾಳಿ

ಬೆಳಗಾವಿ: ಹತ್ತು ಹದಿನೈದು ಜನ ಸೇರಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ.
ಬೆಂಗಳೂರಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿದ್ದಕ್ಕೆ, ಬೆಂಗಳೂರಿನಲ್ಲಿ ಭ್ರಷ್ಟಾಚಾರ ಮಾಡಿದ್ದಕ್ಕೆ ಹತ್ತು ಹಲವಾರು ಹಗರಣಗಳು ಅವರ ಕಾಲದಲ್ಲಿ ಆಗಿವೆ. ಅದನ್ನ ಮುಚ್ಚಿ ಹಾಕಲು ಈ ರೀತಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಅವಿಭಾಜ್ಯ ಅಂಗ. ಭ್ರಷ್ಟಾಚಾರ ಅಂದ್ರೇ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ. ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಅವರು ಈ ತರದ ಮುಚ್ಚಿ ಹಾಕಿಕೊಳ್ಳುವ ನಾಟಕ ಮಾಡ್ತಿದ್ದಾರೆ.
ಜನ ಯಾರು ಇದನ್ನ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ನಿಂದ ಬೆಂಗಳೂರಿನಲ್ಲಿ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ವಿಚಾರವಾಗಿ ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಇಂದು ಸಾಂಬ್ರಾ ವಿಮಾನ ನಿಮಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂವಿಧಾನಾತ್ಮಕವಾಗಿ ರಚನೆಯಾದ ಲೋಕಾಯುಕ್ತ ಮುಚ್ಚಿ ಹಾಕಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟು ರಕ್ಷಣೆ ಕೊಟ್ಟರು. ತಾವೇ ಸ್ವಂತ ಭ್ರಷ್ಟಾಚಾರ ಮಾಡಿ ಮುಚ್ಚಿ ಹಾಕಿದ್ರೂ. ಅವರ ವಿರುದ್ಧ ಇರುವ ಎಲ್ಲಾ ಕೇಸ್ ಎಸಿಬಿಗೆ ಕೊಟ್ಟು ಮುಚ್ಚಿ ಹಾಕಿದ್ರೂ. ಯಾರು ಯಾರು ಕೇಸ್ ಕೊಟ್ಟಿದ್ರೂ ಅದೆಲ್ಲವನ್ನೂ ಮತ್ತೆ ಲೋಕಾಯುಕ್ತಕ್ಕೆ ಉಲ್ಲೇಖ ಮಾಡ್ತೇವಿ.
ಲೋಕಾಯುಕ್ತ ತನಿಖೆ ಆಗುತ್ತೆ, ಅದರಲ್ಲಿ ಮೊದಲು ಸ್ವಚ್ಛ ಆಗಿ ಬನ್ನಿ ಎಂದು ಟಾಂಗ್ ಕೊಟ್ಟರು.

TV24 News Desk
the authorTV24 News Desk

Leave a Reply