ಬೆಳಗಾವಿ

ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ 

ಬೈಲಹೊಂಗಲ : ತಾಲೂಕಿನ ಅಣಿಗೊಳ ಗ್ರಾಮದಲ್ಲಿ ಗುಟ್ಕಾ ವಿಚಾರಕ್ಕೆ ಶುರುವಾಗ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳದಲ್ಲಿ ನಡೆದಿದೆ.
ಕಳೆದ ರಾತ್ರಿ ಗುಟ್ಕಾ ತಿಂದು ಉಗುಳಿದ ವಿಚಾರಕ್ಕೆ ಮಂಜುನಾಥ್‌ಗೆ ಅಜಯ್ ಹಿರೇಮಠ (25) ಎಂಬವನೊಂದಿಗೆ ಗಲಾಟೆಯಾಗಿತ್ತು.ಕ್ಷುಲ್ಲಕ  ಕಾರಣಕ್ಕೆ ಗಲಾಟೆ ಶುರುವಾಗಿದೆ. ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳದು ಕೊಲೆ ಮಾಡಲಾಗಿದೆ. ಮಂಜುನಾಥ್‌ ಸುಣಗಾರ (45)  ಕೊಲೆಯಾದ ವ್ಯಕ್ತಿ. ಅಜಯ್‌ ಹಿರೇಮಠ ಎಂಬಾತಕೊಂದು ಪರಾರಿಯಾಗಿದ್ದಾನೆ.ಇಬ್ಬರು ಕುಡಿದು ಪಾನ್‌ ಶಾಪ್‌ ಬಳಿ ನಿಂತಿದ್ದರು. ಗುಟ್ಕಾ ತಿಂದು ಉಗುಳಿದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಉಂಟಾಗಿದೆ. ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
TV24 News Desk
the authorTV24 News Desk

Leave a Reply