ಬೆಳಗಾವಿ: ಸದಸ್ಯರಿಗೆ ಲಘುವಾಗಿ ಮಾತನಾಡಿರುವ ಸಚಿವ ಗೋವಿಂದ ಕಾರಜೋಳ ಅವರು ಕ್ಷಮೆ ಕೇಳಬೆಕೆಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರೆ, ಸಚಿವರು ಉತ್ತರಿಸುವ ವೇಳೆ ಸಭಾದ್ಯಕ್ಷರ ಅನುಮತಿ ಇಲ್ಲದೆ ಉಪ ಪ್ರಶ್ನೆ ಕೇಳಿದ ಶಾಸಕಿ ಅಂಜಲಿ ನಿಂಬಾಳ್ಕರ ಅವರನ್ನು ಮೊದಲು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿಯಲಾಯಿತು.ಸಭಾದ್ಯಕ್ಷರ ಸ್ಥಾನದಲ್ಲಿದ್ದ ಕುಮಾರ ಬಂಗಾರಪ್ಪ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ,ಸಚಿವರಾದ ಮಾಧುಸ್ವಾಮಿ,ಗೋವಿಂದ ಕಾರಜೋಳ, ಸೇರಿದಂತೆ ,ಪ್ರತಿಪಕ್ಷಗಳ ಸದಸ್ಯರ ಜೊತೆ ನಡೆಸಿದ ಸಂದಾನ ವಿಫಲವಾಗಿದ್ದರಿಂದ ಅನಿವಾರ್ಯವಾಗಿ ಸದನವನ್ನು ಮುಂದೂಡಲಾಯಿತು. ಹೀಗೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ತಮ್ಮ ತಮ್ಮ ಪ್ರತಿಷ್ಟಿಗೆ ಬಿದ್ದ ಪರಿಣಾಮ ಸದನವನ್ನು ಎರಡು ಬಾರಿ ಮುಂದೂಡಲಾಯಿತು.
ಸದನದ ಭಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಶಾಸಕರೊಬ್ಬರನ್ನು ಸಚಿವರಿಬ್ಬರು ಏಕವಚನದಲ್ಲಿಗದರಿಸಿದ ಪರಿಣಾಮ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ,ಗದ್ದಲ ಕೋಲಾಹಲ ಉಂಟಾಗಿ ಸದನವನ್ನು ಮುಂದೂಡಿದ ಪ್ರಸಂಗ ಜರುಗಿತು.
ಗ್ರಾಮಿಣ ಭಾಗಗಳಿಗೆ ಬಸ್ ಸೌಲಭ್ಯಗಳನ್ನು ಒದಗಿಸಬೇಕು ಎಂದು ಶಾಸಕ ಸಿದ್ದು ಸವದಿಯವರು ಸಚಿವ ಶ್ರೀರಾಮಲು ಅವರಿಗೆ ಮನವಿ ಮಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಅನೇಕ ಸದಸ್ಯರು ಇದು ಕೇವಲ ಒಂದು ಕ್ಷೇತ್ರದ ಸಮಸ್ಯೆ ಅಲ್ಲಾ ರಾಜ್ಯದ ಅನೇಕ ಕಡೆ ಸಮಸ್ಯೆ ಇದೆ,ಪರಿಣಾಮ ಮಕ್ಕಳು ಶಾಲೆಗೆ ಹೋಗಲು ಸಾದ್ಯವಾಗುತ್ತಿಲ್ಲಾ ,ಸರಿಯಾದ ಚಾಲಕರಿಲ್ಲಾ, ಇದರಿಂದ ತೊಂದರೆ ಯಾಗಿದೆ ಎಂದು ಸರ್ಕಾರದ ಗಮನ ಸೆಳೆದರು.ಈ ಸಮಯದಲ್ಲಿ ಸಚಿವ ಶ್ರೀರಾಮಲು ನೀಡಿದ ಉತ್ತರ ತೃಪ್ತಿ ಇಲ್ಲಾ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸದನದ ಭಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದ ಕಾಂಗ್ರೆಸ್ ಶಾಸಕ ಡಾ,ರಂಗನಾಥ ಮತ್ತು ಎಚ್ ಸಿ ರಂಗನಾಥ ಇವರಿಗೆ ಸಚಿವರಾದ ಮಾಧುಸ್ವಾಮಿ ಕೇರಳಿ ನಿಂದೆನೋ ಸ್ಪೇಷೆಲ್ ಹೋಗೋ ಆಚೆ ಎಂದು ಗದರುಸಿದರೆ ಸಚಿವ ಕಾರಜೋಳ ನಿನಗೆ ಕಾಮನ್ ಸೇನ್ಸ ಇದಿಯಾ ಎಂದು ಗದರಿಸಿದ್ದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಎದ್ದು ನಿಂತು ಜವಾಬ್ದಾರಿಯುತ ಸಚಿವರಾಗಿ ನಿವು ನಡೆದುಕೋಳ್ಳುತ್ತಿರುವ ರೀತಿ ಸರಿಯಾಗಿದಿಯಾ ? ಇಲ್ಲಿ ಗುಂಡಾಗಿರಿ ಪಾಳೆಗಾರಿಕೆ ನಡೆಯುವದಿಲ್ಲಾ ಸದಸ್ಯರು ಪ್ರತಿಭಟನೆ ಮಾಡುವದು ಅವರ ಹಕ್ಕು , ಸದಸ್ಯರಿಗೆ ಗದರಿಸುವದು ನಿಯಮಕ್ಕೆ ವಿರುದ್ದ ವಾಗಿದೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.