ರಾಯಬಾಗ : ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ BSC ಓದಲು ಇಷ್ಟವಿಲ್ಲವೆಂದು ತಡರಾತ್ರಿಯಲ್ಲಿ ನಿಂಗಣ್ಣಾ (ಉರ್ಪ ಮಾರುತಿ) ಚಿದಾನಂದ ನಾವ್ಹಿ ವಯಸ್ಸು 22 ನೇಣಿಗೆ ಶರಣಾಗಿದ್ದಾನೆ.
ಈತ ಜಮಖಂಡಿಯ BLD ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಆದರೆ ಮೂರು ದಿನಗಳ ಹಿಂದಷ್ಟೇ ಸ್ವಗ್ರಾಮವಾದ ಯಲ್ಪಾರಟ್ಟಿಗೆ ಆಗಮಿಸಿದ್ದ ಎಂದು ತಂದೆ ತಾಯಿ ಹೇಳಿದರು,
ಆದರೆ ನಿನ್ನೆ ಮನೆಯಲ್ಲಿ ತಡರಾತ್ರಿ ಮನೆಯ ಮುಂದೆ ಇರುವ ಛಾವಣಿಯಲ್ಲಿ ಮಲಗಿಕೊಂಡಾಗ ನಿಂಗಣ್ಣಾ ,(ಉರ್ಪ ಮಾರುತಿ) ನಾವ್ಹಿ ಮನೆಯೊಳಗೆ ಮಲಗಿ ಕೊಂಡಿದ್ದ ಎಂದು ತಂದೆ ತಾಯಿ ಮಾಹಿತಿ ನೀಡಿದರು .
ಬೆಳಿಗ್ಗೆ ಎದ್ದು ತಂದೆ ತಾಯಿ ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತು ಆದರೆ ಈ 22 ರ ವಯಸ್ಸಿನ ಯುವಕ ಮಾರುತಿ ನಾವ್ಹಿ ಸಾಯುವದಕ್ಕಿಂತ ಪೂರ್ವದಲ್ಲಿ ಡೇತ್ ನೋಟನ್ನು ಸಹ ಬರೆದಿಟ್ಟು ನೇಣಿಗೆ ಶರಣಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಡೇತ ನೋಟಿನಲ್ಲಿ ನನ್ನನು ಕ್ಷೇಮಿಸಿ ಬಿಡಿ, ನಂಗೆ BSC ಇಷ್ಟ ಇಲ್ಲ ಮನಿ ಪರಿಸ್ಥಿತಿ ನೋಡಿ ನಾನೂ BSC ಮಾಡಿನಿ ಈಗ ನನಗೆ study pressure ಬಾಹಳ ಆಗೆತಿ ಅದಕ್ಕೆ ನಾ ಸಾಯುತ್ತೆನೆ,Sorry papa Sorry mom ಎಂದು ಡೇತ್ ನೋಟ ಬರೆದಿಟ್ಟ ನೇನಿಗೆ ಶರಣಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಹಾರುಗೇರಿ ಪೊಲೀಸ್ ಠಾಣೆಯ ಪಿಎಸ್ಐ ರಾಘವೇಂದ್ರ ಖೋತ,ಸಿಬ್ಬಂದಿಗಳ ಜೊತೆಗೇ ಸ್ಥಳಕ್ಕೆ ಬೆಟ್ಟಿ ನೀಡಿ ಸ್ಥಳ ಪರಿಶೀಲಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಯುವಕನ ತಂದೆ ತಾಯಿಗಳಿಂದ ಮಾಹಿತಿ ಪಡೆದು ಪಂಚನಾಮೆ ಮಾಡಲು ಹಾರೂಗೇರಿಯ ಸರ್ಕಾರಿ ಆಸ್ಪತ್ರೆಗೆ ಶವ ರವಾನಿಸಿದರು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.