



ಬೆಳಗಾವಿ:
ಮಹಾರಾಷ್ಟ್ರದ ಪಶ್ಚಿಮಘಟ್ಟಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್(ರಾಜಾಲಖಮನಗೌಡ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶವೂ ಶೇಖಡಾ 100℅ ಭರ್ತಿಯಾಗಿರುವುದರಿಂದ ಇಂದು ಅಂದರೆ 17/08/2026 ರಂದು ಸಂಜೆ 4 ಗಂಟೆಗೆ ಜಲಾಶಯದಿಂದ ಸುಮಾರು 5 ಸಾವಿರ ಕ್ಯೂಸೇಕ್ ನೀರು ನದಿಗೆ ಬಿಡುವುದಾಗಿ ಹಿಡಕಲ್ ಜಲಾಶಯದ ಅಧಿಕಾರಿಗಳು ಪತ್ರಿಕಾಪ್ರಟಕಣೆ ಹೊರಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಧಿಕಾರಿಗಳು ಜಲಾಶಯಕ್ಕೆ ಈಗಾಗಲೇ 8523 ಕ್ಯೂಸೇಕ್ ಒಳಹರಿವು ಇದ್ದು 5 ಸಾವಿರ ಕ್ಯೂಸೇಕ್ ನೀರನ್ನು ನದಿಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. 51 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗಾಗಲೇ ಶೇಖಡಾ 48 ಟಿಎಂಸಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ. ಡೆಡ್ ಸ್ಟೋರೇಜ್ ಹೊರತುಪಡಿಸಿದರೆ ಜಲಾಶಯವು ಶೇಖಡಾ ನೂರರಷ್ಟು ತುಂಬಿದೆ ಹೀಗಾಗಿ ಇಂದು ಸಂಜೆ 4 ಗಂಟೆಗೆ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದ್ದು ಘಟಪ್ರಭಾ ನದಿ ತೀರ ಹಾಗೂ ಹಿರಣ್ಯಕೇಶಿ ನದಿ ತೀರದ ಜನ ಎಚ್ಚರಿಕೆಯಿಂದಿರಲು ಜಲಾಶಯದ ಅಧಿಕಾರಿಗಳು ಕೋರಿದ್ದಾರೆ. ಅಲ್ಲದೆ ನದಿ ತೀರದ ತೋಟದ ವಸತಿಗಳಲ್ಲಿ ವಾಸಿಸುವ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.









