ಬೆಳಗಾವಿ : ಬೆಳಗಾವಿ ನಗರದಲ್ಲಿಂದು ಅಮ್ಮ ಪ್ರತಿಷ್ಠಾನದ ವತಿಯಿಂದ ಡಾ. ಸೋನಾಲಿ ಸರ್ನೋಬತ್ ಅವರಿಗೆ ಹಲವಾರು ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ, ರಾಜ್ಯಮಟ್ಟದ ಅಮ್ಮ ಪ್ರಶಸ್ತಿ ನೀಡಲಾಯಿತು.
ಸಮಾಜ ಸೇವಕರು ಕಷ್ಟ, ಸವಾಲುಗಳನ್ನೆಲ್ಲ ದಾಟಿ ಸಾಧನೆ ಮಾಡಿದವರನ್ನು ನೋಡಿದ ಬೇರೆಯವರಿಗೂ ಪ್ರೋತ್ಸಾಹಿಸಬೇಕು .ತಾವು ಯಾರಿಗಾದರು ನೀವು ಮಾಡುತ್ತಿರುವ ಕೆಲಸ ಚೆನ್ನಾಗಿದೆ ಎಂದು ಹೇಳಿದರೆ ಅದು ಅವರಿಗೆ ಇನ್ನಷ್ಟು ಉತ್ಸಾಹ ತುಂಬಿದಂತಾಗುತ್ತದೆ ಅದರ ಹಾಗೆ ಅಮ್ಮ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ಬಾಳಾಸಾಹೇಬ ಉಡಗಟ್ಟಿಅವರು ಸಮಾಜದಲ್ಲಿ ಸಾಧನೆಯನ್ನು ಮಾಡಿರುವ ಹಲವಾರು ಸಾಧಕರಿಗೆ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದಾರೆ. ಅದರಂತೆ ಡಾ. ಸೋನಾಲಿ ಸರ್ನೋಬತ್ ಅವರು ಮಾಡಿರುವ ಸಮಾಜ ಸೇವೆ , ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ರಾಜಕೀಯದಲ್ಲೂ ಮಾಡಿರುವ ಸಾಧನೆ ಹಲವಾರು ಜನಪರ ಹೋರಾಟಗಳಲ್ಲಿ ಭಾಗಿಯಾಗಿ ಡಾ. ಸೋನಾಲಿ ಸರ್ನೋಬತ್ ಅವರು ಹೀಗೆ ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ
ಇವರ ಸಾಧನೆಯನ್ನು ಗುರುತಿಸಿ ಅಮ್ಮ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ಬಾಳಾಸಾಹೇಬ ಉಡಗಟ್ಟಿಡಾ. ಸೋನಾಲಿ ಸರ್ನೋಬತ್ ಅವರಿಗೆ ರಾಜ್ಯಮಟ್ಟದ ಅಮ್ಮ ಪ್ರಶಸ್ತಿ ಗೌರವ ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದಭದಲ್ಲಿ ಪ್ರಭು ಕಾಕತಿಕರ, ಸದಾನಂದ ತೆಳಗಡೆ, ಶ್ರೀಮತಿ ಮಂಗಳಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.