ಬೆಳಗಾವಿಬೆಳಗಾವಿ ನಗರ

ನಿಮಗೆ ತಾಕತ್ತಿದ್ದರೆ ಬಾದಾಮಿಯಿಂದ ಸ್ಪರ್ಧೆ ಮಾಡಿ

ಬೆಳಗಾವಿ:ನಾನು ಮೊಳಕಾಲ್ಮೂರು ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ನಿಮಗೆ ತಾಕತ್ತು ಇದ್ದರೆ ಬದಾಮಿ ಮತಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ನೋಡೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಸವಾಲು ಹಾಕಿದರು.ಗುರುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,

ನನ್ನ ಸ್ಪರ್ಧೆ ಬಗ್ಗೆ ಮೊಳಕಾಲಮೂರನಲ್ಲಿ ಮಾತನಾಡಿರುವ ಹಿರಿಯ ನಾಯಕ‌ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರಲ್ಲ. ಬಾದಾಮಿಯಲ್ಲಿ ಜನರು ಸಿದ್ದರಾಮಯ್ಯಗೆ ಮಸಿ ಬೆಳೆಯುವ ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದರು.ಮೊದಲು ಅವರ ಕ್ಷೇತ್ರ ಯಾವದು ಎಂದು‌ ಘೋಷಣೆ ಮಾಡಬೇಕು. ಕ್ಷೇತ್ರ‌ ಇಲ್ಲದೆ ಪರದೇಶಿಯಾಗಿ ಓಡಾಡುತ್ತಿರುವವರಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು.

TV24 News Desk
the authorTV24 News Desk

Leave a Reply