ಬೆಳಗಾವಿ :ಕರುನಾಡ ರಾಜಕುಮಾರ ಡಾ. ಪುನೀತ್ ರಾಜಕುಮಾರ ಇಂದಿಗೆ ಅಗಲಿ ಬರೋಬರಿ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರತ್ನ ಪುನೀತ ರಾಜಕುಮಾರ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಬೆಳಗಾವಿಯ ಸಮರ್ಥ ನಗರದಲ್ಲಿ ಪುನೀತ ರಾಜಕುಮಾರ ಅಭಿಮಾನಿ ಗಳಿಂದ ಅಪ್ಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು, ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮುರಗೇಂದ್ರಗೌಡ ಪಾಟೀಲ ಅವರು ಮಾತನಾಡಿ ಒಂದು ವರ್ಷದ ಹಿಂದೆ ಕರುನಾಡಿನ ದೀಪ ಹೆಮ್ಮೆಯ ನಾಯಕ, ಚಲನ ಚಿತ್ರ ನಟ ಪುನೀತ್ ರಾಜಕುಮಾರ ಅವರು ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ ನಿಜ ವಾದ ಜೀವನದಲ್ಲಿಯೂ ಸಾಮಾಜಿಕ ಸೇವೆ ಸಲ್ಲಿಸಿ ಮನೆ ಮನೆಯಲ್ಲಿಯೂ ಎಲ್ಲರ ಮನದಲ್ಲಿ ಹಚ್ಚು ಹಸಿರಾಗಿ ಉಳಿದಿದ್ದಾರೆ ಅಪ್ಪು ಅವರು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ನಾವು ನಡೆಯೋಣ ಎಂದರು. ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭೈರಗೌಡ ಪಾಟೀಲ, ಸಮರ್ಥ ನಗರದ ಪುನೀತ ರಾಜಕುಮಾರ ಅಪಾರ ಅಭಿಮಾನಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.