ಬೆಳಗಾವಿಬೆಳಗಾವಿ ನಗರ

ದಿವ್ಯಾಂಗ ಸರಕಾರಿ ನೌಕರರಿಗೆ ವಿಶೇಷ ಸನ್ಮಾನ..! 

ಬೆಳಗಾವಿ: ಸಮೃದ್ಧ ಅಂಗವಿಕಲರ ಸಂಸ್ಥೆ ಶಾಹುನಗರ  ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾವಿ ದರ್ಪನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರದಂದು SG ಬಾಳೆಕುಂದ್ರಿ ಸಭಾಂಗಣದಲ್ಲಿ ಜರುಗಿತು.  ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ 134  ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಬೆಳಗಾವಿಯ ವಿವಿಧ ಕಾಲೇಜುಗಳ ಪ್ರಾಚಾರ್ಯರಿಗೆ  ಹಾಗೂ ದಿವ್ಯಾಂಗ ಸರಕಾರಿ ನೌಕರರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಶ್ರೀ ಶ್ರೀ ಮ ನಿಕ್  ಪ್ರಭು ಗುರುಸಿದ್ಧ ಸ್ವಾಮೀಜಿ ಕಾರಂಜಿ  ಮಠ ಬೆಳಗಾವಿ, ಮುಖ್ಯ ಅತಿಥಿಗಳಾಗಿ  ಲಕ್ಷ್ಮಣ್ ಬಾಬಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೆಳಗಾವಿ,  ಶಂಕರ್ ಗುಡಸ್ ಸಂಸ್ಥಾಪಕರು ಹಾಗೂ  ಮಾಜಿ ಅಧ್ಯಕ್ಷರು ಲಿಂಗಾಯತ ಸಂಘಟನೆ ಬೆಳಗಾವಿ, ರಾಜು ಬೋರಗಾವಿ, ಉದ್ಯಮಗಾರರು ಸಂಕೇಶ್ವರ್, ಕೃಷ್ಣ ಗಾಡಿವಡ್ಡರ್ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರು ಕರಡಿಗುದ್ದಿ ಬೆಳಗಾವಿ, ರಾವಸಾಬ್ ಶಿರಹಟ್ಟಿ ವ್ಯವಸ್ಥಾಪಕರು ನಗರ ನಿರಾಶ್ರಿತರ ಕೇಂದ್ರ  ಬೆಳಗಾವಿ, ಶಿವನಗೌಡ ಪಾಟೀಲ್ ಅಧ್ಯಕ್ಷರು ಸಮೃದ್ಧ ಅಂಗವಿಕಲರ ಸಂಸ್ಥೆ ಶಾಹು ನಗರ  ಬೆಳಗಾವಿ,  ಪ್ರಶಾಂತ ಪೋತದಾರ ಕಾರ್ಯದರ್ಶಿಗಳು ಸಮೃದ್ಧ ಅಂಗವಿಕಲರ ಸಂಸ್ಥೆ ಶಾಹುನಗರ ಬೆಳಗಾವಿ, ಶ್ರೀಮತಿ  ಸೌಮ್ಯ ಪಾಟೀಲ್ ಉಪಾಧ್ಯಕ್ಷರು ರೋಟರಿ ಕ್ಲಬ್ ಆಫ್ ದರ್ಪನ್,  ವಿಜಯಲಕ್ಷ್ಮಿ ಮನಿಕೇರಿ ಕಾರ್ಯದರ್ಶಿಗಳು ರೋಟರಿ ಕ್ಲಬ್ ಆಫ್  ದರ್ಪನ್, ಕಾರ್ಯಕ್ರಮದ ಗಣಾಧ್ಯಕ್ಷತೆಯನ್ನು ಸುರೇಶ್  ಪಟ್ಟೇದ ಸಹಾಯಕ ಪ್ರಾಧ್ಯಾಪಕರು ರಾಜ್ಯಶಾಸ್ತ್ರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಎಡಹಳ್ಳಿ ಬಾಗಲಕೋಟೆ ಅವರು  ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ  ಶ್ರೀಗಳು ವೇದಿಕೆಯ ಮೇಲೆ ಆಸೀನರಾದ  ಗಣ್ಯರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಅಂಗವಿಕಲರ ಈ ಪ್ರೇರಣ ದಾಯಕ ಕಾರ್ಯವನ್ನು ಮೆಚ್ಚಿ ಹರ್ಷ ವ್ಯಕ್ತಪಡಿಸಿ ಆಶೀರ್ವಚನ ನೀಡಿದರು. 
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿ ಗಣ್ಯರು ಬೆಳಗಾವಿಯ ಶಾಲಾ ಕಾಲೇಜುಗಳ ಶಿಕ್ಷಕರು ಪ್ರಾಧ್ಯಾಪಕ ಪ್ರಾಚ್ಯರ್ಯರನ್ನು  ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಂದ ಸರಕಾರಿ ನೌಕರರನ್ನು ಸತ್ಕರಿಸಿ ಸದಾ ಸಂಸ್ಥೆಯೊಂದಿಗೆ ಇರುತ್ತೇವೆಂದು ಭರವಸೆ ನೀಡಿದರು.
 ಗಣಾಧ್ಯಕ್ಷತೆ ವಹಿಸಿದ ತ ಸುರೇಶ್ ಪಟ್ಟೇದ ಅವರು ಸಂಸ್ಥೆಯ ಪ್ರಮುಖ ದ್ಯೆಯ ವಿಕಲಚೇತನರನ್ನು ಸ್ವಾವಲಂಬಿನ್ನಾಗಿಸುವುದು ಸಂಸ್ಥೆಯ ಸಂಕಲ್ಪ ಎಂದು ಹೇಳಿದರು.  ಕಾರ್ಯಕ್ರಮವನ್ನು ಪ್ರಶಾಂತ ಪೋತದಾರರ್ ಸ್ವಾಗತಿಸಿದರು, ರಾಜು ಸೊಂಟಕ್ಕಿ  ಅವರು ವಂದಿಸಿದರು ಲಕ್ಷ್ಮಿ ಕರುವಿನಕಬ ನಿರೂಪಿಸಿದರು.
TV24 News Desk
the authorTV24 News Desk

Leave a Reply